ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Showing posts with label 6.ವ್ಯಾಘ್ರಗೀತೆ. Show all posts
Showing posts with label 6.ವ್ಯಾಘ್ರಗೀತೆ. Show all posts

Saturday, June 13, 2020

ಗದ್ಯಪಾಠ-6.ವ್ಯಾಘ್ರಗೀತೆ


ಲಲಿತ ಪ್ರಬಂಧಗಳು ಎಂದರೇನು?    
ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದು ಕರೆಯಬಹುದು. ಶ್ರೀ ನಾಡಿಗೇರ ಕೃಷ್ಣ್ರಾಯ , ಶ್ರೀ ನಾ. ಕಸ್ತೂರಿ ಮೊದಲಾದವರು ಈ ಬಗೆಯ ಪ್ರಬಂಧಕ್ಕೆ ಹೆಸರಾದವರು. ಹಿಂದೆ ಇದ್ದ ಕೊರವಂಜಿ ಹಾಸ್ಯ ಪತ್ರಿಕೆ ಹಾಸ್ಯ ಪ್ರಬಂಧಕ್ಕೆ ಹೆಸರಾಗಿತ್ತು.
ಲಲಿತ ಪ್ರಬಂಧಗಳ ಲಕ್ಷಣಗಳು :-
  • ಲಲಿತ ಪ್ರಬಂಧಗಳ ಲಕ್ಷಣಗಳನ್ನು ವಿವರಿಸುವುದು ಕಷ್ಟ. ಅದಕ್ಕಾಗಿ ಇಲ್ಲಿ ಲಲಿತ ಪ್ರಬಂಧಗಳ ಬಗೆಗೆ ವಿಮರ್ಶಕರ ಅಬಿಪ್ರಾಯ ಮತ್ತು ತೀರ್ಪುಗಾರರ ಟಿಪ್ಪಣಿಗಳನ್ನು ಕೊಟ್ಟಿದೆ ಅದರಿಂದ ಲಲಿತಪ್ರಬಂಧದ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದು. (ಪ್ರಜಾವಾಣಿ ಸ್ಪರ್ಧೆಯ ತೀರ್ಪುಗಾರರ ಹೇಳಿಕೆ)
  • ‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ ಭಾವಲೋಕವನ್ನು ಅನಾವರಣಗೊಳಿಸಿ’ ಎಂದು ‘ಭೂಮಿಕಾ’ ನೀಡಿದ ಲಲಿತ ಪ್ರಬಂಧ ಸ್ಪರ್ಧೆಗೆ 673 ಮಹಿಳೆಯರು ಸ್ಪಂದಿಸಿದರು ಎಂಬುದು ಇಂದಿನ ಕಾಲಮಾನದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ. ಈ ಎಲ್ಲ ಲೇಖಕಿಯರಿಗೆ ನಮ್ಮ ಅಭಿನಂದನೆಗಳು. ಇಷ್ಟೊಂದು ಮನಸುಗಳಿಗೆ ತಮ್ಮ ಭಾವನೆಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದ್ದು ಹಾಗೂ ಇದಕ್ಕಾಗಿ ಬರವಣಿಗೆಯ ಮಾರ್ಗವನ್ನು ನೆಚ್ಚಿಕೊಂಡಿದ್ದು ನಿಜಕ್ಕೂ ಕುತೂಹಲಕಾರಿ ಅಂಶ.
  • ಇವರಲ್ಲಿ ಬಹುತೇಕ ಮಹಿಳೆಯರು ಇದೇ ಮೊದಲ ಬಾರಿಗೆ ಬರಹದ ಲೋಕಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಅನ್ನಿಸುತ್ತದೆ. ಅದು ಬರವಣಿಗೆಯಲ್ಲಿಯೂ ಕಾಣುತ್ತದೆ. ನಮ್ಮನ್ನು ತಲುಪಿದ ಪ್ರಬಂಧಗಳ ಓರೆಕೋರೆಗಳು ಏನೇ ಇರಲಿ, ಬಹಳಷ್ಟು ಬರವಣಿಗೆಯಲ್ಲಿ ಒಂದು ಬಗೆಯ ತಾಜಾತನ ಇದ್ದುದನ್ನು ಒಪ್ಪಿಕೊಳ್ಳಲೇಬೇಕು.
  • ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಅದು ಹಗುರ ನಿರೂಪಣೆಯಿಂದ ಹರಟೆಯಾಗಿ ಬಿಡುವ, ಅಥವಾ ಸಂಕೀರ್ಣತೆಯಿಂದ ವೈಚಾರಿಕ ಪ್ರಬಂಧವಾಗುವ ಅಪಾಯದಿಂದ ಪಾರಾಗಬೇಕು. ಈಚಿನ ಎರಡು ಮೂರು ದಶಕಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಪ್ರಕಾರಗಳಲ್ಲಿ ಆದ ಬದಲಾವಣೆಗಳು ಲಲಿತ ಪ್ರಬಂಧ ಪ್ರಕಾರದಲ್ಲಿಯೂ ಆಗಿವೆ. ಕಥಾ ಪ್ರಬಂಧ, ಭಾವ ಪ್ರಬಂಧ, ಭಾವಗೀತಾತ್ಮಕ ಪ್ರಬಂಧ ಮುಂತಾಗಿ ಗುರುತಿಸಬಹುದಾದ ಪ್ರಬಂಧಗಳು ಕನ್ನಡದಲ್ಲಿ ಬಂದಿವೆ.
  • ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನಾವು ಓದಿದ ಪ್ರಬಂಧಗಳಲ್ಲಿಯೂ ಈ ಅಂಶಗಳು ಕ್ವಚಿತ್ತಾಗಿಯಾದರೂ ಇದ್ದವು.
  • ಇಲ್ಲಿಯ ಅನೇಕ ಬರಹಗಳು ಗಂಡು ಹೆಣ್ಣಿನ ಅಸಮ ನೆಲೆ, ದಾಂಪತ್ಯ, ಗೃಹಕೃತ್ಯ, ಸಮಯ ನಿರ್ವಹಣೆ ಮುಂತಾದ ವಸ್ತುಗಳನ್ನು ಒಳಗೊಂಡಿವೆ. ಕಲ್ಪನೆ ಅಥವಾ ಲಘಿಮಾ ಕೌಶಲಕ್ಕೆ ಇಲ್ಲಿ ಅವಕಾಶವೇ ಇಲ್ಲದಾಗಿದೆ. ನಾವು ಆಯ್ಕೆ ಮಾಡಿರುವ ಮೊದಲ ಮೂರು ಪ್ರಬಂಧಗಳಲ್ಲಿ, ‘ಅಲ್ಲಿ ಅವಳೇ ಇದ್ದಿದ್ದರೆ’ ಭಾವಗೀತಾತ್ಮಕವಾಗಿ ಆರಂಭವಾಗುತ್ತದೆ.
  • ‘ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ, ನೀಡುವಿಕೆಯ ಹಂಬಲದ ಅವನು, ಜ್ಞಾನದ ಹೊಸ್ತಿಲಲ್ಲಿ ನಿಂತು ರಾತೋರಾತ್ರಿ ಹೊರಟ’ ಸಿದ್ದಾರ್ಥನ ಪಕ್ಕದಲ್ಲಿಯೇ ಇದ್ದ ‘ಅವಳು’ ‘ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ ಇದ್ದು ತೋರಿಸುತ್ತಿದ್ದಳೇನೋ’ ಎಂಬ ಬೀಜಭಾವ ಹೊತ್ತ ಪ್ರಬಂಧ, ಸ್ವಗತದ ಧಾಟಿಯಲ್ಲಿದೆ. ಇದು ಮಧ್ಯದಲ್ಲಿ ಭಾವಲೋಕವನ್ನು ತೊರೆದು ಭಾಷಣದ ಮಟ್ಟಕ್ಕೆ ಇಳಿದುಬಿಡುತ್ತದೆ. ಆದರೂ ಇದೊಂದು ಅತ್ಯುತ್ತಮ ಪ್ರಯತ್ನ ಎಂಬ ಕಾರಣಕ್ಕಾಗಿ ಮೂರನೆಯ ಸ್ಥಾನ ಪಡೆದಿದೆ.
  • ಪ್ರಾಣಿ ದಯೆ, ಜೀವಪ್ರೀತಿ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಯುವತಿಯೊಬ್ಬಳ ಶ್ವಾನಪ್ರೀತಿ ಸ್ನೇಹ ಸಖ್ಯ ಮಮಕಾರ ಸಹಜ, ಲಲಿತಮಯ ನಿರೂಪಣೆಯೊಂದಿಗೆ ಕಥೆ ಹೇಳುವಂತೆ ಸಾಗುವ ‘ಕೈ ಮಗು’ ಒಂದು ವಿಶಿಷ್ಟ ಯತ್ನ. ಹೀಗಾಗಿ ಇದು ಎರಡನೆಯ ಬಹುಮಾನ ಪಡೆದಿದೆ. ಸಾಂಪ್ರದಾಯಿಕ ಲಲಿತಪ್ರಬಂಧದ ಶೈಲಿಯಲ್ಲಿಯೇ ಇರುವ ‘ಸಿರಿಗಂಧಮಯ ಈ ನನ ಹೃದಯ ಏತಕೆ...’ ಅತ್ಯಂತ ಲವಲವಿಕೆಯಿಂದ ಕೂಡಿದೆ.
  • ‘ಲಲಿತ ಅಂದ ಕೂಡ್ಲೆ.. ಬರೇ ಒಂದು ಪದ ನನಗ ಎಷ್ಟೆಲ್ಲ ನೆನಪುಗಳ ಮಳೀಗರೀಲಿಖತ್ತದ...’ ಎಂದು ಲಹರಿಯ ಬೆನ್ನೇರಿ ಲಲಿತಮಯವಾಗಿ ಬಿಚ್ಚಿಕೊಳ್ಳುತ್ತ ಮನಸಿಗೆ ಮುದ ನೀಡುತ್ತದೆ. ಆಡು ಮಾತಿನಲ್ಲಿ ಆಪ್ತವಾಗಿ ಎದುರು ಕೂರಿಸಿಕೊಂಡು ಆ – ಈ ಸುದ್ದಿ ಹೇಳುತ್ತ ತನ್ನ ನೆನಪಿನಂಗಳದಲ್ಲಿ ವಿಹರಿಸುವ ಮನದ ಭಿತ್ತಿ ಚಿತ್ರ ಈ ಪ್ರಬಂಧ.
ಅ.ಸಂ
ಲೇಖಕರ ಹೆಸರು
ಲಲಿತ ಪ್ರಬಂಧಗಳು
1
ಎ.ಎನ್.ಮೂರ್ತಿರಾವ್
ಸಮಗ್ರ ಲಲಿತ ಪ್ರಬಂಧಗಳು
2
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಹೇಮಾವತಿಯ ತೀರದಲ್ಲಿ, ನಮ್ಮೂರಿನ ರಸಿಕರು
3
ಶಿವರಾಮ ಕಾರಂತ,
ಮೈಲಿಕಲ್ಲಿನೊಡನೆ ಮಾತುಕತೆ
4
ದಾಶರಥಿ ದೀಕ್ಷಿತ್
ಗಾಂಪರ ಹರಟೆಗಳು
5
ಎನ್ಕೆ
ಮುಂಗಾಲ್ ಪುಟಿಗೆ
6
ನಾಡಿಗೇರ ಗೋವಿಂದರಾವ್
ನಗೆಬರಹಗಳು
7
ಕುಡ್ಡಿ ವಾಸುದೇವ ಶೆಣೈ
ಕಸದ ಡಬ್ಬಿಗಳು
8
ಎಚ್.ಕೆ.ರಂಗನಾಥ
ವೈದ್ಯನಲ್ಲದ ಗಂಡ
9
ಬೀಚಿ
ತಿಮ್ಮನ ತಲೆ
10
ಎಚ್.ಎಲ್.ಕೇಶವ ಮೂರ್ತಿ
ನೀನ್ಯಾಕೊ ನಿನ್ನ ಹಂಗ್ಯಾಕೊ, ಹ್ಯಂಗಾರ ಟಿಕೇಟ್ ಕೊಡಿ
11
ಜಿ.ಪಿ.ರಾಜರತ್ನಂ
ಹನಿಗಳು
ಲಲಿತ ಪ್ರಬಂಧಗಳು