ಪ್ರಚಲಿತ ಪೋಸ್ಟ್ಗಳು
Tuesday, June 1, 2021
Sunday, April 25, 2021
Friday, December 18, 2020
Monday, December 14, 2020
Thursday, October 29, 2020
Friday, October 23, 2020
Tuesday, October 13, 2020
Saturday, October 10, 2020
Saturday, October 3, 2020
Thursday, September 24, 2020
Saturday, September 19, 2020
Monday, September 14, 2020
Sunday, September 13, 2020
Saturday, September 12, 2020
Sunday, August 9, 2020
Tuesday, July 28, 2020
8.ಸುಕುಮಾರಸ್ವಾಮಿಯ ಕಥೆ
ಸುಕುಮಾರಸ್ವಾಮಿಯ ಕಥೆ
ಹಳಗನ್ನಡ ಸಾಹಿತ್ಯದ ಲಕ್ಷಣಗಳು
ಈ ಕಾಲಮಾನವನ್ನು ಪಂಪಯುಗವೆಂದೇ ಕರೆಯುತ್ತಾರೆ. ಈ ಕಾಲದ ಸಾಹಿತ್ಯ ಅತ್ಯಂತ ಪ್ರೌಢವಾಗಿ, ಸತ್ತ್ವಯುಕ್ತವಾಗಿ, ರಸವತ್ತಾಗಿ ಇರುವುದರಿಂದ ಇದನ್ನು ಕನ್ನಡ ಸಾಹಿತ್ಯದ ಸುವರ್ಣಯುಗ ಎಂದೂ ಕರೆಯುವುದುಂಟು. ಈ ಯುಗದಲ್ಲಿ ಚಂಪೂಕಾವ್ಯಗಳು ಪ್ರಚುರವಾಗಿರುವುದರಿಂದ ಚಂಪೂಯುಗವೆಂದೂ ಈ ಕಾವ್ಯಗಳಲ್ಲಿ ಸಾಮಾನ್ಯವಾಗಿ ವೀರರಸ ನೊರೆಗಟ್ಟಿ ಹರಿಯುತ್ತಿರುವುದರಿಂದ ವೀರಯುಗವೆಂದೂ ಹೆಸರಿಸುವ ವಾಡಿಕೆಯಿದೆ. ಈ ಯುಗದ ಕವಿಗಳೆಲ್ಲರೂ ಬಹುಮಟ್ಟಿಗೆ ರಾಜಾಶ್ರಿತರು. ಪಂಪನಂತೆಯೇ ಜೈನಧರ್ಮಾನುಯಾಯಿಗಳಾದ ಮತ್ತಿಬ್ಬರು ಕವಿಗಳು ಪೊನ್ನ ಮತ್ತು ರನ್ನ. ಇಬ್ಬರೂ ರಾಜಪೂಜಿತರಾದ ಆಸ್ಥಾನಕವಿಗಳು. ಪಂಪನಂತೆಯೇ ತಮ್ಮ ಕಾವ್ಯಗಳಲ್ಲಿ ಒಂದನ್ನು ಧರ್ಮಕ್ಕೂ ಮತ್ತೊಂದನ್ನು ಲೌಕಿಕಕ್ಕೂ ಮೀಸಲು ಮಾಡಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಆಯಾ ಕವಿಗಳ ಪೋಷಕರು ಪುರಾಣಪುರುಷರ ವೇಷವನ್ನು ಧರಿಸಿ, ಆಯಾ ಕಾವ್ಯಗಳ ನಾಯಕರಾಗಿ ಮೆರೆದಿದ್ದಾರೆ. ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನ ಆಸ್ಥಾನಕವಿಯಾಗಿದ್ದ, ಕವಿಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ಪೊನ್ನನ ಶಾಂತಿಪುರಾಣ ಜೈನ ಧಾರ್ಮಿಕ ಗ್ರಂಥ. ಈತನ ‘ಭುವನೈಕರಾಮಾಭ್ಯುದಯ’ ಈಗ ಉಪಲಬ್ಧವಿಲ್ಲ. ಇದು ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾದ ಲೌಕಿಕ ಕಾವ್ಯವೆಂದು ಊಹಿಸಲು ಅವಕಾಶವಿದೆ.
ವಡ್ಡಾರಾಧನೆ ಶಿವಕೋಟ್ಯಾಚಾರ್ಯ:-
ವಡ್ಡಾರಾಧನೆಯು ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ
ಜೈನ ಧಾರ್ಮಿಕ(ನೋಂಪಿ) ಕಥೆಗಳ ಸಂಗ್ರಹ. ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ
ಮೊಟ್ಟಮೊದಲ ಗದ್ಯಕೃತಿ ಇದಾಗಿದೆ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ
ರಾಜ್ಯದಲ್ಲಿದ್ದನು. . ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಈ ಕೃತಿಯು ಬ್ರಾ ಜಿಷ್ಣುವಿನಿಂದ ರಚಿಸಲ್ಪಟ್ಟಿತು.
(ಡಾ ಹಂಪನಾ, ಡಾ ಕಲಬುರ್ಗಿ).
ವಡ್ಡಾರಾಧನೆ ರಚನೆ ಆದದ್ದು ಹಳ್ಳಿಖೇಡ(ಬಿ) ಗ್ರಾಮದಲ್ಲಿ
ಎಂದು ಹೇಳಲಾಗಿದೆ.[೧]
`ವಡ್ಡಾರಾಧನೆ' ಕೃತಿಯ ಹೆಸರು ಮತ್ತು ಅದರ ಕರ್ತೃವಿನ
ಬಗ್ಗೆ ಇನ್ನೂ ಖಚಿತ ಅಭಿಪ್ರಾಯ ಹೊಂದಲು ಸಾಕಷ್ಟು ಆಧಾರಗಳಿಲ್ಲ. ಅವು ಇನ್ನೂ ಸಂಶೋಧನೆಗೆ ತೆರೆದ ವಿಷಯಗಳೇ
ಆಗಿವೆ[೨]
ಇದರ ರಚನೆಯ ಕಾಲ ಸು. 920. ಇದರಲ್ಲಿ ಸುಕುಮಾರಸ್ವಾಮಿ,
ವೃಷಭಸೇನರಿಸಿ ಮೊದಲಾದ 19 ಮಹಾಪುರುಷರ ಕಥೆಗಳಿವೆ. ಇವರು ದೇವ, ಮಾನವ, ತಿರ್ಯಕ್ ಮತ್ತು ಅಚೇತನ ಎಂಬ
4 ಬಗೆಯ ಉಪಸರ್ಗಗಳು(ತಪಸ್ಸಿಗೆ ಬರುವ ಅಡ್ಡಿ) ಮತ್ತು 22 ಬಗೆಯ ಪರೀಷಹಗಳನ್ನು(ಕೋಟಲೆ) ಸಹಿಸಿ ತಪಸ್ಸುಮಾಡುವುದು.
ಈ ರೀತಿಯ ತಪಸ್ಸನ್ನು ಉಪಾಸನೆ ಅಥವಾ ಆರಾಧನೆ ಎನ್ನುತ್ತಾರೆ. ಮರಣದ ಸಮಯದಲ್ಲಿ ದರ್ಶನ, ಜ್ಞಾನ, ಚಾರಿತ್ರ
ಮತ್ತು ತಪಸ್ಸುಗಳೆಂಬ 4 ಗುಣಗಳನ್ನು ಆತ್ಮನಲ್ಲಿ ಸ್ಥಿರವಾಗಿಸಿಕೊಳ್ಳುವುದರಿಂದ ಆತ್ಮ ಶುದ್ಧವಾಗಿ
ಮುಕ್ತಿ ಪಡೆಯುತ್ತದೆ; ಕರ್ಮಕ್ಷಯ ಮಾಡಿಕೊಂಡು ಪ್ರಾಯೋಪವೇಶ ದಿಂದ ದೇಹತ್ಯಾಗಮಾಡಿದವರು ಉಪಸರ್ಗ ಕೇವಲಿಗಳಾಗುತ್ತಾರೆ
ಎಂದು ನಂಬಿಕೆ. ಈ ಕಥೆಗಳು ಸಂಸ್ಕೃತದ ಆರಾಧನಾ ಎಂಬ ಗ್ರಂಥದಲ್ಲಿವೆ(1539-47). ಇವು ಹರಿಷೇಣ, ಶ್ರೀಚಂದ್ರ
ಮೊದಲಾದವರ ಕಥಾಕೋಶ ಗಳಲ್ಲಿಯೂ ಕಾಣಿಸುತ್ತವೆ. ಆರಾಧನೆಯ ಟೀಕೆ ಸಂಸ್ಕೃತದಲ್ಲಿದ್ದರೆ ಉದಾಹರಣೆಯ ಕಥೆಗಳು
ಪ್ರಾಕೃತದಲ್ಲಿವೆ. ಆರಾಧನೆಯ ಪ್ರತಿಕಾರರರು ಕಥೆಗಳ ಆರಂಭದಲ್ಲಿ ವಿವಿಧ ಪ್ರಾಕೃತ ಕೃತಿಗಳಿಂದ ಬೇರೆ
ಬೇರೆ ಗಾಹೆಗಳನ್ನು ತೆಗೆದು ಸೇರಿಸಿದ್ದಾರೆ. ವಡ್ಡಾರಾಧನೆಯಲ್ಲಿ ಮೊದಲು ಗಾಹೆ ಮತ್ತು ಅದರ ಕನ್ನಡ
ಅನುವಾದಗಳನ್ನು ನೀಡಿ ಅನಂತರ ಕಥೆಯನ್ನು ಹೇಳಲಾಗಿದೆ.
ಆರಾಧನೆಯನ್ನು ಬರೆದವರಲ್ಲಿ ಶಿವಾರ್ಯ ಪ್ರಾಚೀನ. ಇವನಿಗೆ
ಶಿವಕೋಟಿ ಎಂಬ ಹೆಸರೂ ಇದೆ. ಇವನು ಕ್ರಿ.ಶ.೬ ಸು. 1ನೇ ಶತಮಾನದವನು. ಅರಾಧನಾ ಕೃತಿಗೆ ಭಗವತೀ, ಭಗವತೀ
ಆರಾಧನಾ, ಮೂಲಾರಾಧನಾ, ಬೃಹತ್ ಆರಾಧನಾ ಮೊದಲಾದ ಹೆಸರುಗಳಿವೆ. ಆರಾಧನಾ ಗ್ರಂಥಗಳಲ್ಲಿ ಶಿವಾರ್ಯನ ಗ್ರಂಥ
ಮಹತ್ವದ್ದು. ಇದರಲ್ಲಿ 5 ಬಗೆಯ ಮರಣಗಳ ವಿವರಣೆಯಿದೆ. 2 ಸಾವಿರಕ್ಕಿಂತ ಹೆಚ್ಚು ಪ್ರಾಕೃತ ಗಾಹೆಗಳಿವೆ.
ಇದರಲ್ಲಿ ಶೀರ್ಷಿಕೆಗಳಿರುವ 40 ಅಧಿಕಾರಗಳಿವೆ. `ಕವಚ ಎಂಬ ಶೀರ್ಷಿಕೆ 35ನೆಯದು.
ಬೃಹತ್(ಗಾತ್ರದ ಗ್ರಂಥ)ಆರಾಧನಾ ವಡ್ಡಾರಾಧನಾ ಆಗಿದೆ
(ಹೋಲಿಸಿ: ಬೃಹತ್ಕಥೆ>ವಡ್ಡಕಥೆ). ಆದ್ದರಿಂದ ಇಲ್ಲಿ ವಡ್ಡ ಎಂದರೆ ವೃದ್ಧ ಎಂಬ ಅರ್ಥ ಹೊಂದುವುದಿಲ್ಲ.
ಹಾಗೆಯೇ ಕನ್ನಡದ ವಡ್ಡಾರಾಧನೆಯೇ ಇಡೀ ಬೃಹತ್ ಆರಾಧನೆಯಲ್ಲ. ಏಕೆಂದರೆ ಇದರಲ್ಲಿ ಆರಾಧನೆಯ ಕವಚದ ವರೆಗಿನ
ಕಥೆಗಳು ಮಾತ್ರ ಇವೆ. ಇದರಲ್ಲಿ ಉಪಸರ್ಗ ಕೇವಲಿಗಳು, ಮಹಾಪುರುಷರು ಮಾತ್ರ ಇದ್ದಾರೆ. ಆದ್ದರಿಂದ ವಡ್ಡಾರಾಧನೆಯನ್ನು
`ಮಹಾಪುರುಷರ್ಕಳ ಕಥೆ ಎಂದು ಕರೆಯುವುದು ಉಚಿತ ಎಂದು ಪ್ರೊ ಆ ನೇ ಉಪಾಧ್ಯೆ ಸೂಚಿಸಿದ್ದಾರೆ. ಶಿವಾರ್ಯನ
`ಮೂಲಾರಾಧನೆಗೆ ಭ್ರಾಜಿಷ್ಣು ಬರೆದ ಟೀಕೆಯಿಂದ ಈ ಕಥೆಗಳನ್ನು ಯಾರೊ ಸಂಗ್ರಹಿಸಿ ಇತರ ಕಥಾಕೋಶಗಳ ನೆರವಿನಿಂದ
ವಿಸ್ತರಿಸಿ ಕನ್ನಡದ ವಡ್ಡಾರಾಧನೆಯನ್ನು ಸಿದ್ಧಪಡಿಸಿದ್ದಾರೆ. ಅವರು ಯಾರೆಂಬುದನ್ನು ಕೃತಿಯಲ್ಲಿ ಎಲ್ಲಿಯೂ
ತಿಳಿಸಿಲ್ಲವಾದರೂ ಅವರು ಶ್ರವಣಬೆಳಗೊಳ ಅಥವಾ ಬಳ್ಳಾರಿ ಜಿಲ್ಲೆಯ ಕೋಗಳಿಯ ಸುತ್ತಮುತ್ತ್ತ ಇದ್ದವರು
ಎಂದು ತಿಳಿಯುತ್ತದೆ. ಅವರನ್ನೇ ಮೂಲಾರಾಧನೆಯ ಕರ್ತೃವಿನ ಹೆಸರಿನಿಂದ ` ಶಿವಕೋಟಿ' ಎಂದು ಕರೆಯುವುದು
ಸರಿಯಲ್ಲ. ಅವರ ಕಾಲ ಕ್ರಿ. ಶ. ಸು 10-11ನೇ ಶತಮಾನ.
- ವಡ್ಡ ಶಬ್ದವು ವರ್ಧಮಾನ (ವಡ್ಡಮಾಣ) ನನ್ನು ಸೂಚಿಸುತ್ತದೆ ಎಂಬುದು ಒಂದು ತೀರ ಇತ್ತೀಚಿನ ಅಭಿಪ್ರಾಯವಾಗಿದೆ.[
ವಡ್ಡಾರಾಧನೆಯಲ್ಲಿರುವ
ಕಥೆಗಳ ಪಟ್ಟಿ
1.ಸುಕುಮಾರಸ್ವಾಮಿಕಥೆ : ಹಿಂದಿನ ಜನ್ಮದ ಅತ್ತಿಗೆ, ಈಗ ನರಿಯಾಗಿ ಮೂರುಹಗಲು ಮೂರು ರಾತ್ರಿ ಕಿತ್ತು ತಿಂದರೂ ವೇದನೆಯನ್ನು
ಸಹಿಸಿ ಸಮ್ಯಕ್ದರ್ಶನ, ಜ್ಞಾನ, ಚಾರಿತ್ರಗಳನ್ನು ತೋರಿ ದೇವನಾದ ಕಥೆ.
2.ಸುಕೌಶಳಸ್ವಾಮಿ ಕಥೆ : ಪರ್ವತದ ಮೇಲೆ ಹುಲಿ ಕ್ರೋಧದಿಂದ ಕಿತ್ತು ತಿನ್ನುವುದನ್ನು
ಸಹಿಸಿ ಮೋಕ್ಷ ಸಾಧಿಸಿದ ಕಥೆ.
3.ಗಜಕುಮಾರನ ಕಥೆ : ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮವನ್ನು ಸುಲಿದು,
ಕಾದ ಕಬ್ಬಿಣದ ಮೊಳೆಗಳನ್ನು ಹೊಡೆದುದನ್ನು ಸಹಿಸಿದ ಕಥೆ.
4.ಸನತ್ಕುಮಾರ ಚಕ್ರವರ್ತಿಯ ಕಥೆ : ನೂರಾರು ವರ್ಷ ಕಾಲ ಏಳು ನೂರು ವ್ಯಾಧಿಗಳನ್ನು
ಸಹಿಸಿ ಸಮಾಧಿಮರಣ ಪಡೆದ ಕಥೆ.
5.ಅಣ್ಣಿಕಾ ಪುತ್ರನ ಕಥೆ : ನದಿಯಲ್ಲಿ ನಾವೆ ಮುಳುಗುವಾಗಲೂ ಧ್ಯಾನಮಾಡಿ
ಮೋಕ್ಷ ಪಡೆದ ಕಥೆ.
6.ಭದ್ರಬಾಹು ಭಟ್ಟರರ ಕಥೆ : ಹಸಿವೆಯನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ
ಕಥೆ.
7.ಲಲಿತಘಟೆಯ ಕಥೆ : ನದಿಯಲ್ಲಿ ಕೊಚ್ಚಿಹೋಗುವಾಗ ಲಲಿತ ಘಟೆ ಎಂಬ ಜನರ
ಗುಂಪು ಧ್ಯಾನದಿಂದ ಅಹಮಿಂದ್ರ ಪದವಿ ಪಡೆದ ಕಥೆ.
8.ಧರ್ಮಘೋಷ ಭಟ್ಟಾರನ ಕಥೆ : ನದಿಯ ತೀರದಲ್ಲಿ ಉಪವಾಸ ಮಾಡಿ ಬಾಯಾರಿಕೆಯನ್ನು
ಗೆದ್ದು ಅಚ್ಚುತೇಂದ್ರನಾದ ಕಥೆ.
9.ಸಿರಿದಿಣ್ಣ ಭಟ್ಟಾರರ ಕಥೆ : ಶೀತವಾತಗಳನ್ನು ಸಹಿಸಿ ರತ್ನತ್ರಯವನ್ನು
ಸಾಧಿಸಿದ ಕಥೆ.
10.ವೃಷಭಸೇನ ಭಟ್ಟಾರರ ಕಥೆ : ಕಾದ ಬಂಡೆಯ ಮೇಲೆ ಕುಳಿತು ಬಿಸಿಲು, ಬಿಸಿಗಾಳಿಗಳನ್ನು
ಸಹಿಸಿ ಸದ್ಗತಿ ಸಾಧಿಸಿದ ಕಥೆ.
11.ಕಾರ್ತಿಕ ಋಷಿಯ ಕಥ : ಶಕ್ತಿ ಆಯುಧದ ಇರಿತವನ್ನು ಸಹಿಸಿ ಆರಾಧನೆಯನ್ನು
ಸಾಧಿಸಿದ ಕಥೆ.
12.ಅಭಯಘೋಷನೆಂಬ ಮುನಿಯ ಕಥೆ : ಚಕ್ರಾಯುಧದ ಹೊಡೆತವನ್ನು ಸಹಿಸಿ ಇಂದ್ರನಾದ
ಕಥೆ.
13.ವಿದ್ಯುಚ್ಚೋರ ರಿಸಿಯ ಕಥೆ : ಭಯಂಕರ ಸೊಳ್ಳೆಗಳನ್ನು ಸಹಿಸಿ ಸದ್ಗತಿ
ಪಡೆದ ಕಥೆ.
14.ಗುರುದತ್ತ ಭಟಾರನ ಕಥೆ : ಬೆಂಕಿಯ ವೇದನೆಯನ್ನು ಸಹಿಸಿ ಸದ್ಗತಿ ಸಾಧಿಸಿದ
ಕಥೆ.
15.ಚಿಲಾತಪುತ್ರನ ಕಥೆ: ಗಾಯಗಳಿಗೆ ಕಟ್ಟಿರುವೆಗಳು ಮುತ್ತಿ ತಿಂದುದನ್ನು
ಸಹಿಸಿ ಅಹಮಿಂದ್ರನಾದ ಕಥೆ.
16.ದಂಡಕ ರಿಸಿಯ ಕಥೆ : ಬಾಣ ನಾಟಿದನ್ನು ಸಹಿಸಿ ರತ್ನತ್ರಯ ಸಾಧಿಸಿದ
ಕಥೆ.
17.ಅಯ್ನೂರು ಋಷಿಗಳ ಕಥೆ : ಗಾಣಕ್ಕೆ ಹಾಕಿ ಹಿಂಸಿಸಿದನ್ನು ಸಹಿಸಿ ಸದ್ಗತಿ
ಪಡೆದ ಕಥೆ.
18.ಚಾಣಕ್ಯರಿಸಿಯ ಕಥೆ : ಗೊಬ್ಬರದ ರಾಶಿಯ ನಡುವೆ ಸುಟ್ಟುದನ್ನು ಸಹಿಸಿ
ಕ್ಷಮೆ ಮೆರೆದು ಸದ್ಗತಿ ಪಡೆದ ಕಥೆ.
19.ವೃಷಭಸೇನ ರಿಸಿಯ ಕಥೆ : ಸಜೀವ ದಹನವನ್ನು ಸಹಿಸಿ ರತ್ನತ್ರಯ ಸಾಧಿಸಿದ
ಕಥೆ.
Wednesday, June 17, 2020
ಗದ್ಯಪಾಠ-7.ವೃಕ್ಷಸಾಕ್ಷಿ
ಕಥಾ ಸಾಹಿತ್ಯ
ಸ್ವಭಾವ ಸಹಜವಾಗಿ ಮೂಡಿಬಂದ ಮಾನವನ ವಿವಿಧ ಪ್ರವೃತ್ತಿಗಳಲ್ಲಿಯೇ
ವಿವಿಧ ಕಲೆಗಳ ಉಗಮವಿದೆ. ಸುಖ, ದುಃಖ, ಜಿಗುಪ್ಸೆ, ಭಯಗಳುಂಟಾದಾಗ ಮನುಷ್ಯ ವಿವಿಧ ಹಾವಭಾವಗಳ ಮೂಲಕ
ಅದನ್ನು ಅಭಿವ್ಯಕ್ತಗೊಳಿಸುತ್ತಾನೆ. ಇದು ಸಹಜ ಕ್ರಿಯೆ.
ಇದನ್ನು ಪ್ರಕಟಿಸಲು ಮನುಷ್ಯ ಎರಡು ಮಾರ್ಗಗಳನ್ನು
ಕಂಡುಕೊಂಡಿದ್ದಾನೆ. ಒಂದು : ತನ್ನಲ್ಲುಂಟಾದ ಆಂತರಿಕ ಮತ್ತು ಭಾವನಾತ್ಮಕ ಸಂವೇಧನೆಗಳನ್ನು ಲಲಿತಕಲೆಗಳ
ಮೂಲಕ ಹೊರಹಾಕುವುದು. ಎರಡು : ಬುದ್ಧಿ ಗಮ್ಯವಾದ ವಿಚಾರಗಳನ್ನು ನಾಟ್ಯ, ನೃತ್ಯ, ಕಾವ್ಯ, ಕಥನಕಲೆಗಳ
ಮೂಲಕ ವ್ಯಕ್ತಪಡಿಸುವುದು. ಹೀಗೆ ಬುದ್ಧಿಗಮ್ಯವಾದ ವಿಚಾರವನ್ನು ಸತ್ಯದೊಂದಿಗೆ ಕಲ್ಪನೆ ಸೇರಿಸಿ ಹೇಳುವುದೇ
ಕಥೆ.
ಮಾನವನ ಹುಟ್ಟಿನಿಂದ ಸಾವಿನವರೆಗೆ ಕಥೆಗಳು ಹರಡಿಕೊಂಡಿದ್ದು,
ಮನುಷ್ಯನ ಜೀವನವೇ ಒಂದು ಕಥೆಯಾಗಿದೆ. ಈ ಕಥನ ಕಲೆಯು
ಯಾವುದೊಂದು ದೇಶಕ್ಕಾಗಲಿ, ಕಾಲಕ್ಕಾಗಲಿ ಸೀಮಿತವಾದುದಲ್ಲ. ನಾಗರೀಕತೆಯ ಪೂರ್ವದಲ್ಲಿ ಮಾನವನು ಗೆಡ್ಡೆಗೆಣಸು
ತಿನ್ನುತ್ತ, ಬಯಲಿನಲ್ಲಿ ಬೆತ್ತಲೆಯ ಬದುಕು ಸಾಗಿಸುತ್ತಿರುವಾಗಿನಿಂದ ಹಿಡಿದು, ಚಂದ್ರಲೋಕದಲ್ಲಿ ಮನೆ
ಕಟ್ಟುತ್ತಿರುವವರೆಗೂ ಈ ಕತೆ ಹೇಳುವ, ಕೇಳುವ, ಓದುವ, ಬರೆಯುವ ವೈವಿಧ್ಯತೆಯಿಂದೊಡಗೂಡಿದ ಕಲೆ ಅವಿರಳವಾಗಿ,
ಅವಿಚ್ಛಿನ್ನವಾಗಿ ಹರಿದು ಬೆಳೆದು ಬಂದಿದೆ. ಪ್ರಕೃತಿಯ ಅದ್ಭುತ ಬದಲಾವಣೆಗಳಲ್ಲಿ ಅದರಿಂದ ಹೊರಹೊಮ್ಮುವ
ವರ್ಣನಾತ್ಮಕ ರೂಪಗಳಲ್ಲಿ, ಮಾನವನ ಬುದ್ಧಿಯ ಸವಾಲುಗಳಾಗಿ, ಉತ್ತರಿಸಲಾಗದ ಒಗಟುಗಳಾಗಿ ತೋರಿದ ಅನಂತ
ಸೃಷ್ಟಿಕ್ರಿಯೆಗಳೇ ಈ ಕಥನಕಲೆಗೆ ಮೂಲವೆಂದು ಹೇಳಬಹುದು.
‘ಕಥೆ’ ಪದದ ನಿಷ್ಪತ್ತಿ
:
·
ಕಥೆಯೆಂಬ ಪದ ‘ಕಥಾ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ಕಥಾ ಎಂಬ ಪದಕ್ಕೆ ಸಂಸ್ಕೃತದ
‘ಕಥ್’ ಎಂಬ ಪದ ಮೂಲವಾಗಿದೆ. ಕಥೆ ಎಂದರೆ ‘ಹೇಳು’ ಎಂದರ್ಥ. ‘ಕಥಾ’ ಎಂಬ ಶಬ್ಧದ ಪ್ರಯೋಗವು ಪ್ರಥಮವಾಗಿ
ವೇದಗಳಲ್ಲಿಯೇ ಕಂಡುಬರುತ್ತದೆ. ಕಥೆ ಹೇಳುವವನನ್ನು ‘ಕಥಕಾ’ ಎಂದು ಕರೆಯಲಾಗುತ್ತದೆ(ಪಾಣಿನಿ).
ಕಥಾನಕ ಎಂದರೆ ‘ಹೇಳುವಿಕೆ’ ಎಂದರ್ಥ.
·
‘ಕಥ್+ಅ=ಕಥಾ. ಮುಂದೆ ಈ ಪದವು ಕಥ್+ಎ=ಕಥೆ-ಅಂದರೆ ‘ಅ’ ಸ್ಥಾನದಲ್ಲಿ ‘ಎ’ ಬಂದು ಸೇರಿತು. ಮುಂದೆ ಈ ‘ಕಥೆ’ ಎಂಬ ಪದವೇ
ಆಡುಮಾತಿನಲ್ಲಿ ‘ಕತೆ’ ಎಂದು ಬಳಕೆಯಾಗುತ್ತಿದೆ. ಒಟ್ಟಿನಲ್ಲಿ ಕತೆ ಎಂದರೆ-“ಸತ್ಯ ಮತ್ತು ಕಲ್ಪನೆಗಳ
ಸಮ್ಮಿಶ್ರರೂಪವಾಗಿದೆ.”
ಕಥೆಗಳ ಉಗಮ ಮತ್ತು ವಿಕಾಸ :
·
ಕಥೆಗಳು ಮೂಲತಃ ಮೌಖಿಕ ಪರಂಪರೆಯಿಂದ ಸೃಷ್ಟಿಯಾದವು ಎಂಬುದು ನಿರ್ವಿವಾದವಾದ
ಸಂಗತಿಯಾಗಿದೆ. ಆದರೆ ಜನಪದವು ಕಥೆಗಳಿಗೆ ಮೂಲ ಆಕರವಾಗಿದ್ದು, ವೇದಗಳ ಕಾಲದಿಂದ ರಾಮಾಯಣ, ಮಹಾಭಾರತದಂತಹ
ಶ್ರೇಷ್ಟ ಪೌರಾಣಿಕ ಗ್ರಂಥಗಳು ಸಹ ಜನಪದರ ಮೂಲಕ ಮೌಖಿಕ ಪರಂಪರೆಯಲ್ಲಿ ಉಳಿದು ಬೆಳೆದು ಬಂದಿವೆ.
ಆದ್ದರಿಂದಲೇ ‘ರಾಮಾಯಣ ಮತ್ತು ಮಹಾಭಾರತಗಳನ್ನು ಕಥೆಗಳ ಕಗ್ಗಾಡು’
ಎಂದು ಕರೆಯಲಾಗುತ್ತದೆ’
·
ಭಾರತೀಯ ಶಿಷ್ಟ ಸಾಹಿತ್ಯದಲ್ಲಿ ಕಥೆಗಳ ಬೆಳವಣಿಗೆಯನ್ನು ನೋಡುವುದಾದರೆ; ಗುಣಾಢ್ಯನಿಂದ
ಪೈಶಾಚಿ ಭಾಷೆಯಲ್ಲಿ ರಚಿತವಾದ ‘ಬೃಹತ್ಕಥಾ’ (ಕ್ರಿ.ಶ.550-600) ಗ್ರಂಥವು ಭಾರತದ ಪ್ರಾಚೀನ
ಕಥನಗ್ರಂಥವೆಂಬ ಖ್ಯಾತಿಯನ್ನು ಪಡೆದಿದೆ. ಇದನ್ನು ‘ದುರ್ವಿನೀತನು’ ‘ವಡ್ಡಕಥಾ’ ಎಂಬ ಹೆಸರಿನಲ್ಲಿ
ಕನ್ನಡೀಕರಿಸಿದ್ದಾನೆ. ಈ ಬೃಹತ್ಕಥೆಯ ಜೊತೆಗೆ ಹೆಸರಿಸಬಹುದಾದ ಇನ್ನೊಂದು ಮಹಾನ್ ಗ್ರಂಥವೆಂದರೆ,
ವಸುಭಾಗಭಟ್ಟ ಸಂಸ್ಕೃತ ‘ಪಂಚತಂತ್ರ’ ಕೃತಿಯಾಗಿದೆ.
·
ಅದೇರೀತಿ ಕನ್ನಡ ಶಿಷ್ಟ ಸಾಹಿತ್ಯದಲ್ಲಿ ಕಥೆಗಳ ಬೆಳವಣಿಗೆಯನ್ನು ನೋಡುವುದಾದರೆ-
· ಕನ್ನಡ ಮೊದಲ ಕೃತಿ ಶ್ರೀವಿಜಯನ ಕವಿರಾಜಮಾರ್ಗ
ಕೃತಿಯಲ್ಲಿ ಹಾಗೂ
· ನಾಗವರ್ಮನ ‘ಕಾವ್ಯಾವಲೋಕನ’ ಕೃತಿಯಲ್ಲಿ
ಗದ್ಯಕಥಾ ಎಂಬ ಪದ ಬಳಕೆಯನ್ನು ನೋಡಬಹುದು.
· ಆದರೆ ಕನ್ನಡದ ಮೊದಲ ಗದ್ಯಕೃತಿಯೆಂದರೆ-ಶಿವಕೋಟ್ಯಾಚಾರ್ಯನ
‘ವಡ್ಡಾರಾಧನೆ’(950) ಕೃತಿಯಾಗಿದೆ.
· ನಂತರ ಚಾವುಂಡರಾಯನ-ಚಾವುಂಡರಾಯ ಪುರಾಣ.
· ಬಂಧುವರ್ಮನ – ಜೀವಸಂಭೋಧನಂ
· ನಯಸೇನನ – ಧರ್ಮಾಮೃತ
· ಬ್ರಹ್ಮಶಿವನ – ಸಮಯ ಪರೀಕ್ಷೆ -ಹೀಗೆ ಮೊದಲಾದ ಹಳಗನ್ನಡ
ಗದ್ಯಕಥಾ ಸಂಗ್ರಹಗಳನ್ನು ನೋಡಬಹುದು.
ಇವೆಲ್ಲವುಗಳ ಜೊತೆಗೆ ಮಕ್ಕಳಿಂದ – ವೃದ್ಧರವರೆಗೆ ಸರ್ವರೂ ಇಷ್ಟಪಡುವ
ಕ್ರಿ.ಶ.1031ರಲ್ಲಿ ರಚಿತವಾದ ದುರ್ಗಸಿಂಹನ
ಕನ್ನಡ ‘ಪಂಚತಂತ್ರ’ ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಕಥಾಸಂಗ್ರಹ ಕೃತಿ ಎಂದು
ಹೇಳಬಹುದು.
Saturday, June 13, 2020
ಕನ್ನಡ ಸಣ್ಣ ಕತೆಗಳು
ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ.
- ಕನ್ನಡದಲ್ಲಿ ಸಣ್ಣಕಥೆಗೆ ವಿಶಿಷ್ಟ ರೂಪ ಕೊಟ್ಟವರು, ಚಾರಿತ್ರಿಕವಾಗಿ ಮೊಟ್ಟ ಮೊದಲು ಕಥೆಗಳನ್ನು ಬರೆದವರು ಪಂಜೆ ಮಂಗೇಶರಾಯರು. ನಂತರ ಕೆರೂರ ವಾಸುದೇವಾಚಾರ್ಯರು, ಎಂ.ಎನ್.ಕಾಮತರು ಇವರೆಲ್ಲ ಆರಂಭದಲ್ಲಿ ಸಣ್ಣ ಕಥೆಗಳನ್ನು ಬರೆದವರು. ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ನನ್ನ ಚಿಕ್ಕತಾಯಿ (1900) ಕನ್ನಡದ ಮೊದಲ ಸಣ್ಣ ಕಥೆ ಎಂದು ಭಾವಿಸಲಾಗಿದೆ.
- ಅನಂತರದಲ್ಲಿ ಅವರು ನನ್ನ ಚಿಕ್ಕ ತಂದೆ (1902), ಭಾರತ ಶ್ರವಣ (1902), ಕಮಲಪುರದ ಹೋಟ್ಲಿನಲ್ಲಿ (1902) ಮೊದಲಾದ ಉತ್ತಮ ಕಥೆಗಳನ್ನು ಪ್ರಕಟಿಸಿದರು. ಆದರೆ ಇವರಾರೂ ಅದೊಂದು ಸಾಹಿತ್ಯ ಪ್ರಕಾರವೆಂಬ ಪ್ರಜ್ಞೆಯನ್ನು ಮೂಡಿಸಿರಲಿಲ್ಲ. ಆ ಪ್ರಜ್ಞೆ ಯನ್ನು ಮೂಡಿಸಿ ಅದನ್ನೇ ಮಾಧ್ಯಮವನ್ನಾಗಿ ಬಳಸಿದವರಲ್ಲಿ ಶ್ರೀನಿವಾಸರು (ಮಾಸ್ತಿ) ಮೊದಲಿಗರು. ಇವರು ಸಣ್ಣಕಥೆಯ ಜನಕರೆಂಬ ಹೆಸರಿಗೆ ಪಾತ್ರರಾದವರು.
- ಇವರ ವಸ್ತುವಿನ ಆಯ್ಕೆ, ದೃಷ್ಟಿ, ತಿಳಿಹಾಸ್ಯ, ಸರಳಶೈಲಿ - ಇವು ಕನ್ನಡ ಕಥಾಲೋಕಕ್ಕೆ ಮಾರ್ಗದರ್ಶಕವಾಗಿವೆ. ಇವರ ಕಥೆಗಳು ಅನೇಕ ಸಂಪುಟಗಳಲ್ಲಿವೆ. ರಂಗಪ್ಪನ ದೀಪಾವಳಿಯಿಂದ ಹಿಡಿದು ಇವರ ಎಲ್ಲ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಉತ್ಪ್ರೇಕ್ಷೆಯಿಲ್ಲದೆ ಹೇಳುವ ಕಲೆ. ಇವರ ಕಥೆಗಳಲ್ಲಿ ಆವೇಶವಿಲ್ಲ, ಚಮತ್ಕಾರವಿಲ್ಲ, ವಿಸ್ಮಯವಿಲ್ಲ; ಉದಾತ್ತಗುಣಗಳಿಂದ ತುಂಬಿದ ಆತ್ಮದ ಒಂದು ಚೇತನವನ್ನು ಕಾಣುತ್ತೇವೆ.
- ಇವರ ಇಂದಿರೆಯೋ ಅಲ್ಲವೋ? ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು, ರಂಗಸ್ವಾಮಿಯ ಅವಿವೇಕ, ಇವುಗಳಲ್ಲಿ ಸಣ್ಣಕಥೆಯ ಎಲ್ಲ ಸಲ್ಲಕ್ಷಣಗಳನ್ನೂ ಕಾಣಬಹುದು. ಇವರಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಎಲ್ಲ ಬಗೆಯ ಕಥೆಗಳೂ ಇವೆ. ಸಾಮಾಜಿಕ ಕಥೆಗಳಲ್ಲಿ ಜೀವನಶ್ರದ್ಧೆ ಕಂಡರೆ ಐತಿಹಾಸಿಕ, ಪೌರಾಣಿಕ ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಸಂಸ್ಕೃತಿ ಪ್ರವಾಹವನ್ನು ಕಾಣಬಹುದು.
- ಬಾದಷಹನ ದಂಡನೆ, ಪಂಡಿತನ ಮರಣಶಾಸನ ಇವುಗಳಲ್ಲಿ ರಾಜಕೀಯ ಜೀವನ ಕಂಡರೆ ನಿಜಗಲ್ಲಿನ ರಾಣಿ, ಗೊಂಡೆಯ ಕೃಷ್ಣಮೂರ್ತಿ ಕಥೆಗಳಲ್ಲಿ ನಾಡಿನ ಹೆಣ್ಣುಮಕ್ಕಳ ದೀರೋದಾತ್ತ ಚಿತ್ರಗಳನ್ನು ಕಾಣಬಹುದು. ಆಚಾರ್ಯರ ಪತ್ನಿ, ಹೇಮಕೂಟದಿಂದ ಬಂದಮೇಲೆ, ಮಸುಮತಿ, ಗೌತಮಿ ಹೇಳಿದ ಕಥೆ ಇವುಗಳಲ್ಲಿ ವಸ್ತುವಿನ ಆಯ್ಕೆಯ ಅನನ್ಯತೆಯನ್ನು ಕಾಣಬಹುದು.
- ಕನ್ನಡ ಸಣ್ಣ ಕತೆಗಳು ಸಾ.ರಾ.ಅಬೂಬಕ್ಕರ್
- ರಂಗಣ್ಣನ ಕನಸಿನ ದಿನಗಳು-ಶ್ರೀನಿವಾಸಮೂರ್ತಿ
- ಮಾಸ್ತಿ ವೆಂಕಟೇಶ ಅಯ್ಯಂಗಾರ - ಕನ್ನಡ ಕತೆಗಳು
ಗದ್ಯಪಾಠ-6.ವ್ಯಾಘ್ರಗೀತೆ
ಲಲಿತ ಪ್ರಬಂಧಗಳು ಎಂದರೇನು?
ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದು ಕರೆಯಬಹುದು. ಶ್ರೀ ನಾಡಿಗೇರ ಕೃಷ್ಣ್ರಾಯ , ಶ್ರೀ ನಾ. ಕಸ್ತೂರಿ ಮೊದಲಾದವರು ಈ ಬಗೆಯ ಪ್ರಬಂಧಕ್ಕೆ ಹೆಸರಾದವರು. ಹಿಂದೆ ಇದ್ದ ಕೊರವಂಜಿ ಹಾಸ್ಯ ಪತ್ರಿಕೆ ಹಾಸ್ಯ ಪ್ರಬಂಧಕ್ಕೆ ಹೆಸರಾಗಿತ್ತು.
ಲಲಿತ ಪ್ರಬಂಧಗಳ ಲಕ್ಷಣಗಳು :-
- ಲಲಿತ ಪ್ರಬಂಧಗಳ ಲಕ್ಷಣಗಳನ್ನು ವಿವರಿಸುವುದು ಕಷ್ಟ. ಅದಕ್ಕಾಗಿ ಇಲ್ಲಿ ಲಲಿತ ಪ್ರಬಂಧಗಳ ಬಗೆಗೆ ವಿಮರ್ಶಕರ ಅಬಿಪ್ರಾಯ ಮತ್ತು ತೀರ್ಪುಗಾರರ ಟಿಪ್ಪಣಿಗಳನ್ನು ಕೊಟ್ಟಿದೆ ಅದರಿಂದ ಲಲಿತಪ್ರಬಂಧದ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದು. (ಪ್ರಜಾವಾಣಿ ಸ್ಪರ್ಧೆಯ ತೀರ್ಪುಗಾರರ ಹೇಳಿಕೆ)
- ‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ ಭಾವಲೋಕವನ್ನು ಅನಾವರಣಗೊಳಿಸಿ’ ಎಂದು ‘ಭೂಮಿಕಾ’ ನೀಡಿದ ಲಲಿತ ಪ್ರಬಂಧ ಸ್ಪರ್ಧೆಗೆ 673 ಮಹಿಳೆಯರು ಸ್ಪಂದಿಸಿದರು ಎಂಬುದು ಇಂದಿನ ಕಾಲಮಾನದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ. ಈ ಎಲ್ಲ ಲೇಖಕಿಯರಿಗೆ ನಮ್ಮ ಅಭಿನಂದನೆಗಳು. ಇಷ್ಟೊಂದು ಮನಸುಗಳಿಗೆ ತಮ್ಮ ಭಾವನೆಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದ್ದು ಹಾಗೂ ಇದಕ್ಕಾಗಿ ಬರವಣಿಗೆಯ ಮಾರ್ಗವನ್ನು ನೆಚ್ಚಿಕೊಂಡಿದ್ದು ನಿಜಕ್ಕೂ ಕುತೂಹಲಕಾರಿ ಅಂಶ.
- ಇವರಲ್ಲಿ ಬಹುತೇಕ ಮಹಿಳೆಯರು ಇದೇ ಮೊದಲ ಬಾರಿಗೆ ಬರಹದ ಲೋಕಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಅನ್ನಿಸುತ್ತದೆ. ಅದು ಬರವಣಿಗೆಯಲ್ಲಿಯೂ ಕಾಣುತ್ತದೆ. ನಮ್ಮನ್ನು ತಲುಪಿದ ಪ್ರಬಂಧಗಳ ಓರೆಕೋರೆಗಳು ಏನೇ ಇರಲಿ, ಬಹಳಷ್ಟು ಬರವಣಿಗೆಯಲ್ಲಿ ಒಂದು ಬಗೆಯ ತಾಜಾತನ ಇದ್ದುದನ್ನು ಒಪ್ಪಿಕೊಳ್ಳಲೇಬೇಕು.
- ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಅದು ಹಗುರ ನಿರೂಪಣೆಯಿಂದ ಹರಟೆಯಾಗಿ ಬಿಡುವ, ಅಥವಾ ಸಂಕೀರ್ಣತೆಯಿಂದ ವೈಚಾರಿಕ ಪ್ರಬಂಧವಾಗುವ ಅಪಾಯದಿಂದ ಪಾರಾಗಬೇಕು. ಈಚಿನ ಎರಡು ಮೂರು ದಶಕಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಪ್ರಕಾರಗಳಲ್ಲಿ ಆದ ಬದಲಾವಣೆಗಳು ಲಲಿತ ಪ್ರಬಂಧ ಪ್ರಕಾರದಲ್ಲಿಯೂ ಆಗಿವೆ. ಕಥಾ ಪ್ರಬಂಧ, ಭಾವ ಪ್ರಬಂಧ, ಭಾವಗೀತಾತ್ಮಕ ಪ್ರಬಂಧ ಮುಂತಾಗಿ ಗುರುತಿಸಬಹುದಾದ ಪ್ರಬಂಧಗಳು ಕನ್ನಡದಲ್ಲಿ ಬಂದಿವೆ.
- ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನಾವು ಓದಿದ ಪ್ರಬಂಧಗಳಲ್ಲಿಯೂ ಈ ಅಂಶಗಳು ಕ್ವಚಿತ್ತಾಗಿಯಾದರೂ ಇದ್ದವು.
- ಇಲ್ಲಿಯ ಅನೇಕ ಬರಹಗಳು ಗಂಡು ಹೆಣ್ಣಿನ ಅಸಮ ನೆಲೆ, ದಾಂಪತ್ಯ, ಗೃಹಕೃತ್ಯ, ಸಮಯ ನಿರ್ವಹಣೆ ಮುಂತಾದ ವಸ್ತುಗಳನ್ನು ಒಳಗೊಂಡಿವೆ. ಕಲ್ಪನೆ ಅಥವಾ ಲಘಿಮಾ ಕೌಶಲಕ್ಕೆ ಇಲ್ಲಿ ಅವಕಾಶವೇ ಇಲ್ಲದಾಗಿದೆ. ನಾವು ಆಯ್ಕೆ ಮಾಡಿರುವ ಮೊದಲ ಮೂರು ಪ್ರಬಂಧಗಳಲ್ಲಿ, ‘ಅಲ್ಲಿ ಅವಳೇ ಇದ್ದಿದ್ದರೆ’ ಭಾವಗೀತಾತ್ಮಕವಾಗಿ ಆರಂಭವಾಗುತ್ತದೆ.
- ‘ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ, ನೀಡುವಿಕೆಯ ಹಂಬಲದ ಅವನು, ಜ್ಞಾನದ ಹೊಸ್ತಿಲಲ್ಲಿ ನಿಂತು ರಾತೋರಾತ್ರಿ ಹೊರಟ’ ಸಿದ್ದಾರ್ಥನ ಪಕ್ಕದಲ್ಲಿಯೇ ಇದ್ದ ‘ಅವಳು’ ‘ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ ಇದ್ದು ತೋರಿಸುತ್ತಿದ್ದಳೇನೋ’ ಎಂಬ ಬೀಜಭಾವ ಹೊತ್ತ ಪ್ರಬಂಧ, ಸ್ವಗತದ ಧಾಟಿಯಲ್ಲಿದೆ. ಇದು ಮಧ್ಯದಲ್ಲಿ ಭಾವಲೋಕವನ್ನು ತೊರೆದು ಭಾಷಣದ ಮಟ್ಟಕ್ಕೆ ಇಳಿದುಬಿಡುತ್ತದೆ. ಆದರೂ ಇದೊಂದು ಅತ್ಯುತ್ತಮ ಪ್ರಯತ್ನ ಎಂಬ ಕಾರಣಕ್ಕಾಗಿ ಮೂರನೆಯ ಸ್ಥಾನ ಪಡೆದಿದೆ.
- ಪ್ರಾಣಿ ದಯೆ, ಜೀವಪ್ರೀತಿ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಯುವತಿಯೊಬ್ಬಳ ಶ್ವಾನಪ್ರೀತಿ ಸ್ನೇಹ ಸಖ್ಯ ಮಮಕಾರ ಸಹಜ, ಲಲಿತಮಯ ನಿರೂಪಣೆಯೊಂದಿಗೆ ಕಥೆ ಹೇಳುವಂತೆ ಸಾಗುವ ‘ಕೈ ಮಗು’ ಒಂದು ವಿಶಿಷ್ಟ ಯತ್ನ. ಹೀಗಾಗಿ ಇದು ಎರಡನೆಯ ಬಹುಮಾನ ಪಡೆದಿದೆ. ಸಾಂಪ್ರದಾಯಿಕ ಲಲಿತಪ್ರಬಂಧದ ಶೈಲಿಯಲ್ಲಿಯೇ ಇರುವ ‘ಸಿರಿಗಂಧಮಯ ಈ ನನ ಹೃದಯ ಏತಕೆ...’ ಅತ್ಯಂತ ಲವಲವಿಕೆಯಿಂದ ಕೂಡಿದೆ.
- ‘ಲಲಿತ ಅಂದ ಕೂಡ್ಲೆ.. ಬರೇ ಒಂದು ಪದ ನನಗ ಎಷ್ಟೆಲ್ಲ ನೆನಪುಗಳ ಮಳೀಗರೀಲಿಖತ್ತದ...’ ಎಂದು ಲಹರಿಯ ಬೆನ್ನೇರಿ ಲಲಿತಮಯವಾಗಿ ಬಿಚ್ಚಿಕೊಳ್ಳುತ್ತ ಮನಸಿಗೆ ಮುದ ನೀಡುತ್ತದೆ. ಆಡು ಮಾತಿನಲ್ಲಿ ಆಪ್ತವಾಗಿ ಎದುರು ಕೂರಿಸಿಕೊಂಡು ಆ – ಈ ಸುದ್ದಿ ಹೇಳುತ್ತ ತನ್ನ ನೆನಪಿನಂಗಳದಲ್ಲಿ ವಿಹರಿಸುವ ಮನದ ಭಿತ್ತಿ ಚಿತ್ರ ಈ ಪ್ರಬಂಧ.
ಅ.ಸಂ
|
ಲೇಖಕರ ಹೆಸರು
|
ಲಲಿತ ಪ್ರಬಂಧಗಳು
|
1
|
ಎ.ಎನ್.ಮೂರ್ತಿರಾವ್
|
ಸಮಗ್ರ ಲಲಿತ ಪ್ರಬಂಧಗಳು
|
2
|
ಗೊರೂರು ರಾಮಸ್ವಾಮಿ ಅಯ್ಯಂಗಾರ್
|
ಹೇಮಾವತಿಯ ತೀರದಲ್ಲಿ, ನಮ್ಮೂರಿನ ರಸಿಕರು
|
3
|
ಶಿವರಾಮ ಕಾರಂತ,
|
ಮೈಲಿಕಲ್ಲಿನೊಡನೆ ಮಾತುಕತೆ
|
4
|
ದಾಶರಥಿ ದೀಕ್ಷಿತ್
|
ಗಾಂಪರ ಹರಟೆಗಳು
|
5
|
ಎನ್ಕೆ
|
ಮುಂಗಾಲ್ ಪುಟಿಗೆ
|
6
|
ನಾಡಿಗೇರ ಗೋವಿಂದರಾವ್
|
ನಗೆಬರಹಗಳು
|
7
|
ಕುಡ್ಡಿ ವಾಸುದೇವ ಶೆಣೈ
|
ಕಸದ ಡಬ್ಬಿಗಳು
|
8
|
ಎಚ್.ಕೆ.ರಂಗನಾಥ
|
ವೈದ್ಯನಲ್ಲದ ಗಂಡ
|
9
|
ಬೀಚಿ
|
ತಿಮ್ಮನ ತಲೆ
|
10
|
ಎಚ್.ಎಲ್.ಕೇಶವ ಮೂರ್ತಿ
|
ನೀನ್ಯಾಕೊ ನಿನ್ನ ಹಂಗ್ಯಾಕೊ, ಹ್ಯಂಗಾರ ಟಿಕೇಟ್ ಕೊಡಿ
|
11
|
ಜಿ.ಪಿ.ರಾಜರತ್ನಂ
|
ಹನಿಗಳು
|
ಲಲಿತ ಪ್ರಬಂಧಗಳು
- ಹಗಲುಗನಸುಗಳು-ಎ.ಎನ್.ಮೂರ್ತಿರಾವ್
- ಮಲೆನಾಡಿನ ಚಿತ್ರಗಳು - ಕುವೆಂಪು
- ಹನಿಗಳು-ಜಿ.ಪಿ.ರಾಜರತ್ನಂ
Friday, June 12, 2020
ಗದ್ಯಪಾಠ-5.ಎದೆಗೆ ಬಿದ್ದ ಅಕ್ಷರ
'ಕನ್ನಡದಲ್ಲಿ ವೈಚಾರಿಕ ಸಾಹಿತ್ಯ' : ವಿಚಾರ ಸಾಹಿತ್ಯವೆಂದು ಕರೆಯ ಬಹುದಾದ ಚರ್ಚೆ, ಶಾಸ್ತ್ರ, ಮೀಮಾಂಸೆಯ ಒಂದು ಸಾಹಿತ್ಯ ಪ್ರಕಾರ ಕನ್ನಡದಲ್ಲಿ ಬಹಳ ಹಿಂದಿನಿಂದಲೂ ಸಮೃದ್ಧವಾಗಿ ಬೆಳೆದುಬಂದಿದೆ. ಆದರೆ ಶುದ್ಧ ವೈಚಾರಿಕ ಕೃತಿಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದು ಮಾತ್ರ 20ನೆಯ ಶತಮಾನದಲ್ಲಿ. ಶಾಸನಗಳಲ್ಲೂ ವೈಚಾರಿಕ ಅಂಶಗಳು ಕಂಡುಬರುತ್ತವೆಯಾದರೂ ಅವು ಸಾಹಿತ್ಯ ಪ್ರಕಾರಕ್ಕೆ ಹೆಚ್ಚಾಗಿ ಸೇರುವುದಿಲ್ಲ. 10-11ನೆಯ ಶತಮಾನದವರೆಗೆ ಜೈನಸಾಹಿತ್ಯ ತನ್ನ ದಾರ್ಶನಿಕ ರಂಗದಲ್ಲಿಯೂ ವಿಕಾಸಗೊಂಡಿತ್ತು. ಅಂದಿನ ಸಾಹಿತ್ಯದಲ್ಲಿ ಪ್ರಜ್ಞೆ ಮತ್ತು ಭಾವ (ರಸ) ಎಂಬ ಎರಡು ಪ್ರಕಾರಗಳನ್ನು ಕಲ್ಪಿಸಿದರೆ ಪ್ರಜ್ಞೆಯ ಸಾಹಿತ್ಯದ ಅಂಗವಾಗಿ ವ್ಯಾಕರಣ, ಛಂದಸ್ಸು, ಕಾವ್ಯರೀತಿ ಲಕ್ಷಣಾದಿಗಳಷ್ಟಕ್ಕೆ ಮಾತ್ರ ಕನ್ನಡ ವಿಚಾರ ಸಾಹಿತ್ಯ ಸೀಮಿತವಾಗಿತ್ತು. ಇದಕ್ಕೆ ಕವಿರಾಜಮಾರ್ಗ ಸಾಕ್ಷಿ. ಅನಂತರ ಬಂದ ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ ಶಬ್ದಾನುಶಾಸನ ಅಲ್ಲದೆ ಆಯುರ್ವೇದ, ಜ್ಯೋತಿಷ ಮುಂತಾದವುಗಳನ್ನು ಕುರಿತ ಗ್ರಂಥಗಳು ಆ ಯುಗದ ವೈಚಾರಿಕ ವಾಙ್ಮಯದ ಉದಾಹರಣೆಗಳು (ನೋಡಿ-ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ). ಅನಂತರ 12ನೆಯ ಶತಮಾನದಲ್ಲಿ ವೀರಶೈವ ಸಾಹಿತ್ಯಧಾರೆ ಹರಿಯತೊಡಗಿತ್ತು. ಅಂದಿನ ವಿಚಾರಸರಣಿ ಅನಿವಾರ್ಯವಾಗಿ ಮತೀಯ ಸಂಪ್ರದಾಯದ ಹಿನ್ನೆಲೆಯಲ್ಲಿ ಮುಂದುವರಿದರೂ ಸ್ವತಂತ್ರ ವಿಚಾರಗಳು, ಆಲೋಚನೆಗಳ ಮಥನಕ್ರಿಯೆ ನಡೆಯಿತು. ವಚನಸಾಹಿತ್ಯ ಭಕ್ತಿಯ ವೈರಾಗ್ಯ ಶರಣಾರ್ಥಿ ಅನುಭಾವ ನೀತಿ ಧರ್ಮಗಳ ಪ್ರಚಾರ ಪುರಸ್ಕಾರಗಳ ಧ್ವನಿಯಾಯಿತು.
ದೇವನೂರು ಮಹಾದೇವ ಅವರ

ದೇವನೂರು ಮಹಾದೇವ ಇವರು ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರು.ಹೊಸಗನ್ನಡದ ಇಲ್ಲಿಯವರೆಗಿನ ಸಣ್ಣ ಕತೆಗಳ ಚರಿತ್ರೆಯನ್ನು (೧) ಮಾಸ್ತಿ ಯುಗ (೨) ಲಂಕೇಶ ಯುಗ ಹಾಗು (೩)ದೇವನೂರು ಯುಗ ಎಂದು ವಿಂಗಡಿಸಬಹುದು. ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ.
ಬಾಲ್ಯ, ವಿದ್ಯಾಭ್ಯಾಸ
ದೇವನೂರು ಮಹಾದೇವ ಇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೮ರಲ್ಲಿ. ತಂದೆ ಸಿ.ನಂಜಯ್ಯ(ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ.ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಫ಼ೆಲೋಶಿಪ್ ಅನ್ನು ನಿರಾಕರಿಸಿದ ಹಿರಿಮೆ ಇವರದು.
ಪ್ರಮುಖ ಸಾಹಿತ್ಯ ಕೃತಿಗಳು
ಬಾಲ್ಯ, ವಿದ್ಯಾಭ್ಯಾಸ
ದೇವನೂರು ಮಹಾದೇವ ಇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೮ರಲ್ಲಿ. ತಂದೆ ಸಿ.ನಂಜಯ್ಯ(ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ.ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಫ಼ೆಲೋಶಿಪ್ ಅನ್ನು ನಿರಾಕರಿಸಿದ ಹಿರಿಮೆ ಇವರದು.
ಪ್ರಮುಖ ಸಾಹಿತ್ಯ ಕೃತಿಗಳು
- ಕಥಾಸಂಕಲನಗಳು : "ದ್ಯಾವನೂರು"
- ಕಿರು ಕಾದಂಬರಿ : "ಒಡಲಾಳ"'
- ಕಾದಂಬರಿ : 'ಕುಸುಮಬಾಲೆ'
- ಬಿಡಿ ಬರಹಗಳು : 'ಎದೆಗೆ ಬಿದ್ದ ಅಕ್ಷರ'
- ವಯಸ್ಕರ ಶಿಕ್ಷಣ : 'ನೋಡು ಮತ್ತು ಕೂಡು'
- ಅನುವಾದ : 'ಗಾಂಧಿ ಮತ್ತು ಮಾವೋ'
"ಕುಸುಮಬಾಲೆ" ಇವರು ಬರೆದ ಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು.
ದೇವನೂರು ಮಹಾದೇವರ ಸಾಹಿತ್ಯ ಕುರಿತ ಇತರೆ ಕೃತಿಗಳು
ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ.
ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು - ಉದಯಕುಮಾರ ಹುಬ್ಬು
ದೇವನೂರು ಮಹಾದೇವ - ಎನ್,ಪಿ.ಶಂಕರನಾರಾಯಣರಾವ್
ಪತ್ರಿಕೋದ್ಯಮ ಮತ್ತು ನಿರ್ವಹಿಸಿರುವ ಜವಾಬ್ದಾರಿಗಳು
ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು. ಸುದ್ದಿ ಸಂಗಾತಿ ಪತ್ರಿಕೆಯ ಬೆನ್ನೆಲುಬಾಗಿದ್ದರು.
ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
ಸಂಚಾಲಕರು - ದಲಿತ ಸಂಘರ್ಷ ಸಮಿತಿ
ಸದಸ್ಯರು - ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ
ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ
ದೇವನೂರು ಮಹಾದೇವರ ಸಾಹಿತ್ಯ ಕುರಿತ ಇತರೆ ಕೃತಿಗಳು
ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ.
ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು - ಉದಯಕುಮಾರ ಹುಬ್ಬು
ದೇವನೂರು ಮಹಾದೇವ - ಎನ್,ಪಿ.ಶಂಕರನಾರಾಯಣರಾವ್
ಪತ್ರಿಕೋದ್ಯಮ ಮತ್ತು ನಿರ್ವಹಿಸಿರುವ ಜವಾಬ್ದಾರಿಗಳು
ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು. ಸುದ್ದಿ ಸಂಗಾತಿ ಪತ್ರಿಕೆಯ ಬೆನ್ನೆಲುಬಾಗಿದ್ದರು.
ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
ಸಂಚಾಲಕರು - ದಲಿತ ಸಂಘರ್ಷ ಸಮಿತಿ
ಸದಸ್ಯರು - ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ
ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ
ಸಾಮಾಜಿಕ
ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
ಗೌರವ, ಪುರಸ್ಕಾರ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಲ್ಲಮಪ್ರಭು ಪ್ರಶಸ್ತಿ-೨೦೧೩
ಬೋಧಿವೃಕ್ಷಪ್ತಶಸ್ತಿ -೨೦೧೩
ವಿ,ಎಂ.ಇನಾಂದಾರ್ಪ್ರಶಸ್ತಿ-ಎದೆಗೆ ಬಿದ್ದ ಅಕ್ಷರ ಕೃತಿಗೆ
ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ,
ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯ-೨೦೧೪
ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಮ'ದಲ್ಲಿ ಭಾಗವಹಿಸಿದ್ದಾರೆ.
ಎದೆಗೆ ಬಿದ್ದ ಅಕ್ಷರ ಬಿಡಿ ಲೇಖನಗಳು
- ಕನ್ನಡ ದಾರಿದೀಪ
- ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ
- ಎದೆಗೆ ಬಿದ್ದ ಅಕ್ಷರ : ಒಂದು ಓದು-ನಾಗಣ್ಣ ಕಿಲಾರಿ
- ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ...
- ಎಂದೆಂದಿಗೂ ಸಲ್ಲುವ 'ಎದೆಗೆ ಬಿದ್ದ ಅಕ್ಷರ' – ಓ ...
- ‘ಎದೆಗೆ ಬಿದ್ದ ಅಕ್ಷರ’ : ವಿಮರ್ಶೆ
- ‘ಎದೆಗೆ ಬಿದ್ದ ಅಕ್ಷರ’ : KOER
- ಎದೆಗೆ ಬಿದ್ದ ಅಕ್ಷರ BOOK
ದೇವನೂರು ಮಹಾದೇವ ವಿಡಿಯೋಗಳು
Subscribe to:
Posts (Atom)