ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Saturday, May 16, 2020

ಯುದ್ದ ಎಂದರೇನು?


ಯುದ್ಧ ಎಂದರೆ;
ಉನ್ಮಾದ, ರಣೋತ್ಸಾಹ, ವಿಜಯ, ಬಲಪ್ರದರ್ಶನ, ಬಲಿದಾನ… ಯುದ್ಧ ಎಂದರೆ; ಸಾವು- ನೋವು, ರಕ್ತಪಾತ, ಅಶಾಂತಿ, ಅನಗತ್ಯ ಕಾದಾಟ… ಅಷ್ಟೇ ಅಲ್ಲ, ಯುದ್ಧ ಎಂದರೆ ಅಪಾರ ಪ್ರಮಾಣದ ಹಣದ ಹೂಡಿಕೆ, ವೆಚ್ಚ ಮತ್ತು ಆರ್ಥಿಕತೆ ಮೇಲೆ ಭಾರಿ ಪರಿಣಾಮ ಕೂಡ...






ವ್ಯೂಹ

Jump to navigationJump to search
ವ್ಯೂಹ ಎಂದರೆ - 'ಒಂದು ಯುದ್ಧ ರಚನೆಯಲ್ಲಿ ಸೇನಾಪಡೆಗಳನ್ನು ವ್ಯವಸ್ಥೆಗೊಳಿಸುವುದು', 'ವ್ಯವಸ್ಥೆಗೊಳಿಸುವುದು, ಕ್ರಮಗೊಳಿಸುವುದು, ಸರಿಯಾಗಿ ಜೋಡಿಸುವುದು, ಪ್ರತ್ಯೇಕಿಸುವುದು, ವಿಭಜಿಸುವುದು, ಮಾರ್ಪಡಿಸುವುದು, ಸ್ಥಳಾಂತರಿಸುವುದು, ಕ್ರಮಗೆಡಿಸುವುದು, (ಸ್ವರಗಳು, ಉಚ್ಚಾರಾಂಶಗಳು, ಇತ್ಯಾದಿಗಳನ್ನು) ತೀರ್ಮಾನಿಸುವುದು'. व्यः ಇದರ ಮೂಲವಾಗಿದೆ, ಇದರರ್ಥ 'ಹೊದಿಕೆ' ಅಥವಾ 'ಮುಸುಕು'. ಈ ಶಬ್ದವು ಹೊಮ್ಮುವಿಕೆ ಮತ್ತು ವಿಷ್ಣುವಿನ ವ್ಯಕ್ತ ಶಕ್ತಿಯನ್ನು ಕೂಡ ಸೂಚಿಸುತ್ತದೆ.[೧] ಶಾಸ್ತ್ರಗ್ರಂಥದ ಸಿದ್ಧಾಂತ ಮತ್ತು ಸಂದರ್ಭವನ್ನು ಅವಲಂಬಿಸಿ ಇದರ ಭಿನ್ನ ಅರ್ಥಗಳಿವೆ, ಉದಾಹರಣೆಗೆ ವೇದಗಳ ಜ್ಞಾನವನ್ನು ಬಹಿರಂಗಗೊಳಿಸುವುದು, ವಿಷ್ಣು ಅಥವಾ ಬುದ್ಧನ ಅಭಿವ್ಯಕ್ತಿ, ಮತ್ತು ಮಹಾಭಾರತದ ಯುದ್ಧ ರಚನೆಗಳು.

ಮಹಾಭಾರತದಲ್ಲಿ ವ್ಯೂಹದ ಪರಿಕಲ್ಪನೆ: ಯುದ್ಧ ರಚನೆಗಳು[ಬದಲಾಯಿಸಿ]

ಮಹಾಭಾರತ ಮತ್ತು ಮನುಸಂಹಿತೆಯು ಅನೇಕ ವ್ಯೂಹಗಳನ್ನು ಪಟ್ಟಿಮಾಡುತ್ತದೆ, ಕೆಲವು ಚಿಕ್ಕದಾಗಿದ್ದವು ಮತ್ತು ಬೇರೆಯವು ಭಾರಿ ದೊಡ್ಡದಾಗಿದ್ದವು, ಉದಾಹರಣೆಗೆ :[೨]
  • ಅರ್ಧಚಂದ್ರವ್ಯೂಹ .
  • ಚಕ್ರವ್ಯೂಹ .
  • ಗರ್ಭವ್ಯೂಹ .
  • ಮಕರವ್ಯೂಹ .
  • ಮಂಡಲವ್ಯೂಹ .
  • ಊರ್ಮಿವ್ಯೂಹ .
  • ಶಕಟವ್ಯೂಹ .
  • ಸರ್ವತೋಭದ್ರವ್ಯೂಹ .
  • ಸುಚಿವ್ಯೂಹ .
  • ಶ್ಯೇನವ್ಯೂಹ.
  • ವಜ್ರವ್ಯೂಹ.



ಯುದ್ಧಕ್ಕೆೆ ಆರಂಭವಿದೆ, ಕೊನೆ ಎಂಬುದಿಲ್ಲ!

0
0
0
0
0
0
ಯುದ್ಧವು ಒಂದು ಸಮಸ್ಯೆೆಯೇ ಎಂಬುದೇ ಒಂದು ಸಮಸ್ಯೆೆ. ಗತಿಸಿದ ಯುದ್ಧಗಳೇಕೆ ಆದವು ಎಂದು ಚಿಂತಿಸುವುದರಿಂದ ಇಂದಿನ ಯುದ್ಧಗಳು ಆಗುತ್ತಿಿವೆಯೇಕೆ ಎಂದು ಯೋಚಿಸುವುದು ಮುಖ್ಯ. ಒಂದೇ ಆಹಾರವನ್ನು ತಿಂದು ಹೇಗೆ ಬದುಕಲಾರನೋ, ಹಾಗೆಯೇ ಒಂದೇ ಕಾರಣದ ಮೇಲೆ ಯುದ್ಧವು ಘಟಿಸಲಾರದು. ಯುದ್ಧಕ್ಕೆೆ ಹಲವು ಕಾರಣಗಳು ಇರುತ್ತವೆ. ತೀರ ಪೂರ್ವದಲ್ಲಿ ಒಬ್ಬ ಮನುಷ್ಯನು ಇನ್ನೊೊಬ್ಬನನ್ನು ನರಮಾಂಸಕ್ಕಾಾಗಿ ಕೊಂದು ತಿಂದಿರಬಹುದೆನ್ನುವ, ಅಲ್ಲಿ ಮನುಷ್ಯನಿಂದ ಮನುಷ್ಯ ಸಾಯುತ್ತಾಾನೆ. ಹುಲಿಯ ಬಾಯಿಗೆ ಬಿದ್ದು ಹೋಗುವಷ್ಟು ಹೇಯ ಸಾವಲ್ಲ ಅದು. ಈ ಯುದ್ಧಕಾಲದಲ್ಲಿ ಘನವಾಗಿ ಬದುಕಿ, ಬಡವಾಗಿ ಸಾಯಬೇಕು. ಈ ತನಕ ಸಾವಿನ ನೀತಿಯನ್ನು ಆಲೋಚಿಸಿದ್ದಾಾಯಿತು. ಇನ್ನೂ ಮುಂದೆ ಸಾವಿನ ರೀತಿ ಅದರ ಧರ್ಮವನ್ನು ಕುರಿತು ಯೋಚಿಸುವ ಕಾಲವಿದು. ಯುದ್ಧಕ್ಕೆೆ ಕಾರಣವೇನು? ಅದು ಘಟಿಸಲಿಕ್ಕೆೆ ಯುದ್ಧದ ಕಾರಣವನ್ನು ಯುದ್ಧಪೂರ್ವದಲ್ಲಿ ಚರ್ಚಿಸಬೇಕೇ? ಯುದ್ಧಕಾಲದಲ್ಲಿ ಅಥವಾ ಅನಂತರವೇ ಎಂಬುದೇ ಕಷ್ಟದ ಸಂಗತಿ. ಅದಕ್ಕೆೆ ಕಾರಣ ಈಗಿನ ಯುದ್ಧಗಳು ಆಗಿನ ಯುದ್ಧಗಳಂತಲ್ಲ.
ಇಂದು ಜಗತ್ತನ್ನು ಕಾಡುತ್ತಿಿರುವ ಯುದ್ಧಗಳಿಗೆ ಕೊಳ್ಳುಬಾಕ ಐಡಿಯಾಲಜಿಗಳೇ ಕಾರಣ. ವೈದ್ಯಕೀಯ ವಿಜ್ಞಾಾನದ ರೇಡಿಯೊಲಜಿಯಂತೆಯೇ ಇದು ಮರಣಕ್ಕೆೆ ಒಂದು ಚಿಕಿತ್ಸಾಾಶಾಸ್ತ್ರ. ಆಧುನಿಕ ತಾಂತ್ರಿಿಕ ಜಗತ್ತಿಿನಲ್ಲಿ ಅಧಿಕಾರ ಮತ್ತು ವಿಸ್ತರಣಾ ದಾಹದ ಐಡಿಯಾಲಜಿ ಕಾಲ ಕಾಲಕ್ಕೂ ಬಂದಿದೆ. ಅವುಗಳಲ್ಲಿ ಅತಿಮುಖ್ಯವಾದವುಗಳೆಂದರೆ ಸಾಮ್ರಾಾಜ್ಯವಾದ(ಐಞಛ್ಟಿಿಜ್ಝಿಜಿಞ), ಧನಾತ್ಮಕವಾದ( ಇಜಿಠ್ಝಿಜಿಞ), ಸಮತಾವಾದ (ಖಟ್ಚಜ್ಝಿಜಿಞ), ಫ್ಯಾಾಸಿಸಂ( ಊ್ಚಜಿಞ) ಇವುಗಳ ಮುಖ್ಯ ಧೋರಣೆ ಕೆಳಗಿನಂತಿದೆ. ಬುದ್ಧಿಿ ಯಾರಿಗೆ ಇರಲಿ ಇಲ್ಲದಿರಲಿ -ಹಣ, ರಾಜ್ಯ, ಎರಡೂ ತಮಗಿರಲಿ ಎನ್ನುವುದು ಸಾಮ್ರಾಾಜ್ಯವಾದ. ಬುದ್ಧಿಿ ಸಾಮ್ರಾಾಜ್ಯಗಳು ಯಾರಿಗಿದ್ದರೂ ಸರಿಯೇ- ಹಣ ನಮಗಿರಲಿ ಎಂಬುದು ಧನಸತ್ತಾಾವಾದ. ಬುದ್ಧಿಿಯ ಹಕ್ಕು ಯಾವತ್ತು ಮುಖಂಡನಿಗಿದ್ದು, ಉಪವಾಸಕ್ಕೆೆ ಸಮನಾದ ಹಕ್ಕು ಪ್ರಜೆಗೆ ಇರಬೇಕೆಂಬುದು ಸಮತಾವಾದ. ಬದುಕಿನ ಹಕ್ಕು ಯಾರಿಗೆ ಇಲ್ಲದೇ ಹೋದರೂ ಫಾಸಿಗೆ ಹೋಗುವ ತಮ್ಮ ದೇಶದ ಪ್ರತಿಯೊಬ್ಬನಿಗೂ ಇರಬೇಕೆಂಬುದು ಫಾಸಿಸಂನ ತತ್ತ್ವ.
ಮೊದಲೆರಡು ವರ್ಗಗಳ ಕೂಸೆ-ಡೆಮಾಕ್ರೆೆಸಿ, ಎರಡನೆಯ ಎರಡು ವರ್ಗಗಳ ಕೂಸೆ-ಸ್ಟೆೆಲಿನೊಕ್ರೆೆಸಿ, ಹಿಟ್ಲರೊಕ್ರೆೆಸಿಗಳು. ಈ ಮೂರು ಕ್ರೆೆಸಿಗಳು ಮೇಲಿನ ಐಡಿಯಾಲಜಿಗಳ ಕಾರ್ಯರೂಪಗಳು. ಅವನ್ನು ಕ್ಷುಲ್ಲಕ ಬದುಕಿನ ತತ್ವಗಳು ಎನ್ನುವ ಬದಲು ಅಮೋಘ ಸಾವಿನ ಸಂವಿಧಾನಗಳು ಎನ್ನುವುದು ಸೂಕ್ತ. ಬದುಕು ಎಲ್ಲರಿಗೂ ಸಮ ಎಂಬುದೇ ಡೆಮಾಕ್ರೆೆಸಿ. ತನಗಿಲ್ಲದ ಬದುಕು ಪರರಿಗೆ ಬೇಡ ಎನ್ನುವುದು ಹಿಟ್ಲರೊಕ್ರೆೆಸಿ, ಸಾವಿಗೂ ಬದುಕಿಗೂ ವ್ಯತ್ಯಾಾಸವಿರಕೂಡದು ಎನ್ನುವುದು ಸ್ಟೆೆಲಿನೊಕ್ರೆೆಸಿ. ಇಂದು ಯುದ್ಧದಲ್ಲಿ ದೇಶಗಳು ಇವನ್ನೇ ಪುಷ್ಟಿಿಕರಿಸುವವು. ಯುದ್ಧಪೂರ್ವದಲ್ಲಿ ಈ ರೀತಿಯ ಐಡಿಯಾಲಜಿಗಳು ಆಗ ಕಾಣಸಿಗುವವು. ಈಗಿನ ಯುದ್ಧ ಧರ್ಮ ಬೇರೆ, ಹಿಂದಿನ ಯುದ್ಧ ಧರ್ಮ ಬೇರೆ. ಧರ್ಮದ ಯುದ್ಧ ಅಗ್ಗವಾಗಿದ್ದು ಸಾಂಕ್ರಾಾಮಿಕ ಬೇನೆಗಳ ರೋಗಗಳಂತೆ, ಚಿಕ್ಕಪುಟ್ಟ ಯುದ್ಧಗಳು ಈ ಕಾರ್ಯವನ್ನು ಮಾಡಿ ಮುಗಿಸುತ್ತಿಿದ್ದವು. ನಮ್ಮ ದೇಶದಲ್ಲಿ ಈ ಹಿಂದೆ ಈ ಕೆಲಸವನ್ನು ಭೀಕರ ಬರ, ಕ್ಷಾಮಗಳು ಮಾಡುತ್ತಿಿದ್ದವು. ಈ ಮೇಲಿನ ಎಲ್ಲಾಾ ಯುದ್ಧದ ಮೂಲ ಸಂಗತಿಗಳನ್ನು ಎಣಿಸಹೋದರೆ ಯುದ್ಧವು ತನ್ನ ರೀತಿಯಲ್ಲಾಾಗಲಿ, ಪ್ರಗತಿಪರವಾದ ಸಂಸ್ಕೃತಿ ಎನ್ನಬಹುದೇನೋ?
ಯುದ್ಧ ಎಂದರೆ ಹಿಂಸೆ, ಹಿಂಸೆಗೆ ವಿರುದ್ಧವಾದ ಪದವೆಂದರೆ ಅದು ಅಹಿಂಸೆ. ಅದೊಂದು ಸಾಧಿತ ಪದವಾಗಿರುವುದರಿಂದ ಅದನ್ನು ನಾವು ಕಷ್ಟಪಟ್ಟು ಸಾಧಿಸಿಕೊಳ್ಳಬೇಕಾಗುತ್ತದೆ. ಅದಕ್ಕೆೆ ಸಾಕಷ್ಟು ತಯಾರಿ, ಧೈರ್ಯದಿಂದ ಫಲಿತವಾಗಬೇಕು. ತ್ಯಾಾಗ, ಪ್ರೀತಿ, ಕರುಣೆ, ಕ್ಷಮೆ ಅದರ ಗುಣಗಳು. ಗಾಂಧೀಜಿಯವರನ್ನು ತಿಳಿದುಕೊಂಡವರಿಗೆ ಅಹಿಂಸಾ ಪದದ ಅರ್ಥವಾಗುತ್ತದೆ. ಗಾಂಧೀಜಿಯವರನ್ನು ಕೊಂದವರಿಗೂ ಅಹಿಂಸಾ ಪದದ ಅರ್ಥ ಗೊತ್ತಿಿತ್ತು. ಹಾಗಾಗಿಯೇ ಅವರು ಅಹಿಂಸೆಗಿಂತ ಹಿಂಸೆಯೇ ಮೇಲೆಂದು ಭಾವಿಸಿದರು. ಓಶೋ, ಗಾಂಧೀಜಿಯ ಅಹಿಂಸೆ ಒಂದು ಬಗೆಯ ಹಿಂಸೆ ಎಂದು ವಾದಿಸಿದ. ಆದರೆ ಸಾಮಾಜಿಕ ಕಳಕಳಿಯುಳ್ಳ ಚಿಂತಕರು ಇತಿಹಾಸದುದ್ದಕ್ಕೂ ಅಹಿಂಸೆಯ ಪರವಾಗಿ ವಾದಿಸುತ್ತಲೇ ಬಂದಿದ್ದಾಾರೆ. ಏಸು, ಬುದ್ಧ, ಮಹಾವೀರ, ಬಸವೇಶ್ವರ ಮೊದಲಾದವರು ಅಹಿಂಸೆಯ ಕಡೆ ಮನುಕುಲ ಹೊರಳಿಕೊಳ್ಳಬೇಕಾದ ಅಗತ್ಯವನ್ನು ಪರಿಣಾಮಕಾರಿಯಾಗಿ ಮನಗಾಣಿಸಿದ್ದಾಾರೆ. ಅಹಿಂಸಾವಾದಿಗಳ ಕೈಯಲ್ಲಿ ಆಯುಧಗಳಿಲ್ಲ, ಏಸುವಿನ ಕಣ್ಣಲ್ಲಿ ಕರುಣೆ ಇತ್ತು, ಬುದ್ಧನ ಮುಖದಲ್ಲಿ ಮುಗುಳ್ನಗೆಯಿತ್ತು, ಮಹಾವೀರನ ಮಾತುಗಳಲ್ಲಿ ಅಹಿಂಸೆಯಿತ್ತು ಮತ್ತು ಬಸವೇಶ್ವರರ ವಚನಗಳಲ್ಲಿ ದಯೆಯನ್ನು ಒಳಗೊಂಡ ಮಾನವೀಯತೆ ಇತ್ತು.
ಅನಾದಿ ಕಾಲದಿಂದಲೂ ಈ ಮೌಲ್ಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಈ ಹಿಂದೆ ಗತಿಸಿದ ಘಟನೆಗಳಲ್ಲಿ ಮಾನವನ ಮೂಲ ಗುಣವಾದ ಹಿಂಸೆಯೇ ಮೇಲುಗೈ ಸಾಧಿಸಿದೆ. ಆಧುನಿಕ ಸಮಾಜವು ಬಗೆಬಗೆಯ ಹಿಂಸಾರೂಪಗಳನ್ನು ಪ್ರತೀತಗೊಳಿಸಿಕೊಂಡಿದೆ. ಪರಸ್ಪರ ಚಾರಿತ್ರ್ಯಹರಣ, ಆಹಾರ ಭಿನ್ನತೆಯಂಥ ಅಂಶಗಳನ್ನು ಮುಂದುಮಾಡಿ, ಅದಕ್ಕೆೆ ಶಾಸ್ತ್ರದ ಹೊದಿಕೆ ತೊಡಿಸಿಕೊಂಡು ಬರಲಾಗುತ್ತಿಿದೆ. ಈಗಾಗಲೇ ಗತಿಸಿದ ಯುದ್ಧಗಳಿಂದ ಆದ ಪರಿಣಾಮಗಳನ್ನು ಪೂರ್ತಿಯಾಗಿ ಗ್ರಹಿಸಿಕೊಳ್ಳಲಾಗುತ್ತಿಿಲ್ಲ. ಯುದ್ಧಗಳಿಂದ ನಾಗರಿಕತೆಗೆ ಆದ ಅಪಾರ ನಷ್ಟವನ್ನು ತಿಳಿಸಿಕೊಡುವಲ್ಲಿ ವಿಚಾರವಾದಿಗಳು ಸೋತಿದ್ದಾಾರೆ. ಈ ಕಾರಣದಿಂದಲೇ ಮನಶಾಸ್ತ್ರಜ್ಞರು ಸಂಭ್ರಮಿಸುವ ಮನೋಸ್ಥಿಿತಿಯ ಒಂದು ರೋಗವೆಂದು ವಿಶ್ಲೇಷಿಸಿದ್ದಾಾರೆ.
ಜಗತ್ತಿಿನಲ್ಲಿ ಗತಿಸಿದ ಯುದ್ಧಗಳಿಂದ ಸತ್ತವರ ಸಂಖ್ಯೆೆ ಲೆಕ್ಕಕ್ಕೆೆ ಸಿಗದು. 13ನೆಯ ಶತಮಾನದಷ್ಟು ಹಿಂದೆ ನಡೆದ ಮಂಗೋಲರ ಆಕ್ರಮಣದಲ್ಲಿ ಲಕ್ಷಕ್ಕಿಿಂತಲೂ ಹೆಚ್ಚು ಚೀನಿಯರು ಆತ್ಮಹತ್ಯೆೆ ಮಾಡಿಕೊಂಡರು. 17ನೆಯ ಶತಮಾನದಲ್ಲಿ ಚೀನಾದಲ್ಲಿ ನಡೆದ ಕಿಂಗ್ ಮತ್ತು ಮಿಂಗ್ ರಾಜಮನೆತನಗಳ 60 ವರ್ಷಗಳ ಘರ್ಷಣೆಯಲ್ಲಿ ಸುಮಾರು ಎರಡೂವರೆ ಕೋಟಿ ಜನರು ಸತ್ತರು. 1812ರಲ್ಲಿ ರಷ್ಯಾಾವು ಫ್ರಾಾನ್ಸಿಿನ ಮೇಲೆ ನಡೆಸಿದ ಆಕ್ರಮಣದಲ್ಲಿ 65ಲಕ್ಷ ಜನ ಅಸುನೀಗಿದರು. ಒಂದನೆಯ ಎರಡೂವರೆ ಕೋಟಿ ಹಾಗೂ ಎರಡನೆಯ ಮಹಾಯುದ್ಧದಲ್ಲಿ 7 ಕೋಟಿಗಿಂತ ಹೆಚ್ಚಿಿನ ಜನರು ಪ್ರಾಾಣ ಕಳೆದುಕೊಂಡರು. ಇಂಥಾ ಘಟನೆಗಳಿಂದ ಮನುಕುಲ ಮಾತ್ರ ಪಾಠ ಕಲಿಯದೇ, ಅದು ಮತ್ತೆೆ ಮತ್ತೆೆ ಯುದ್ಧ ಬಯಸುತ್ತಲೇ ಇದೆ. ಲಕ್ಷಾಂತರ ಜನರ ಸಾವನ್ನು ಕಂಡು ತನ್ನ ಗೆಲುವನ್ನು ಸಂಭ್ರಮಿಸಿಕೊಳ್ಳಲಾಗದ ಆಶೋಕನಂಥ ಆರಸ ಮತ್ತೆೆ ಈ ಜಗತ್ತಿಿನಲ್ಲಿ ಎಲ್ಲಿಯೂ ಹುಟ್ಟಲೇ ಇಲ್ಲ.
ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಾಚ್ಯದ 22 ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಯುದ್ಧದ ಕೆನ್ನಾಾಲೆಗೆ ಬಲಿಯಾಗುತ್ತಲೇ 80ರ ದಶಕದಲ್ಲಿ ನಡೆದ ಇರಾನ್-ಇರಾಕ್ ಯುದ್ಧವೊಂದರಲ್ಲಿಯೇ 8 ಲಕ್ಷ ಜನ ಸಾವಿಗೀಡಾಗಿದ್ದರು. ಜಗತ್ತಿಿನ 2ನೆಯ ಮಹಾಯುದ್ಧದ ಕಾಲದಲ್ಲಿ ಜಪಾನ್ ದೇಶದ ಪ್ರಮುಖ ನಗರಗಳಾದ ಹಿರೊಶಿಮಾ, ನಾಗಸಾಕಿ ನಗರಗಳಲ್ಲಿ ಬಿದ್ದ ಪರಮಾಣು ಬಾಂಬಿನ ವಿಕಿರಣಗಳು ಇಂದಿಗೂ ಉಂಟು ಮಾಡುತ್ತಿಿರುವ ಪರಿಣಾಮಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದೇವೆ. ಇನ್ನೂ ಅಮೆರಿಕದಲ್ಲಿ ಈ 2ನೆಯ ಮಹಾಯುದ್ಧದ ಅನಂತರ ಉಂಟಾದ ಮಾನಸಿಕ ಅಸಮತೋಲನವನ್ನು ಸರಿಪಡಿಸಿಕೊಳ್ಳಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆೆಯನ್ನು ಸ್ಥಾಾಪಿಸಿಕೊಂಡಿದೆ. ಈ ಎಲ್ಲಾಾ ಗತಿಸಿದ ಘಟನೆಗಳು ನಮ್ಮ ರಾರಾಜಿಸುತ್ತಿಿದ್ದರೂ ಮತ್ತೆೆ ಮತ್ತೆೆ ನಾವು ಯುದ್ಧದ ಬಗ್ಗೆೆ ಮಾತನಾಡುತ್ತಿಿದ್ದೇವೆ ಎಂದರೆ ಜಗತ್ತಿಿನ ಆಧುನಿಕ ನಾಗರಿಕತೆಗೆ ಇನ್ನೂ ಬಹುದೂರದಲ್ಲಿದ್ದೇವೆ ಎಂದರ್ಥ. ಈ ನಾಗರಿಕತೆಯ ಕುಸಿತಕ್ಕೆೆ ಐಡಿಯಾಲಜಿ ಬುದ್ಧಿಿಜೀವಿಗಳ ಪಾತ್ರವನ್ನು ಈಗ ಅಲ್ಲಗಳೆಯಲಾಗದು. ಇತಿಹಾಸದ ತಿಳಿವಳಿಕೆ ಇದ್ದು, ಇಲ್ಲದವರಂತೆ ನಾಟಕವಾಡುವವರಿಗೆ ಯುದ್ಧದ ಅನಾಹುತಗಳನ್ನು ತಿಳಿಸುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆೆ.
ಗತಿಸಿದ ಆಧುನಿಕ ಜಾಗತಿಕ ಯುದ್ಧಗಳು ಅನೇಕ ಸಮುದಾಯಗಳನ್ನು ಇಲ್ಲವಾಗಿಸುವುದರೊಂದಿಗೆ ಅವುಗಳ ಕುಟುಂಬಗಳನ್ನೇ ಸರ್ವನಾಶ ಮಾಡಿದೆ. ಸಾಮಾಜಿಕ ವ್ಯವಸ್ಥೆೆಯಲ್ಲಿನ ಅಭಿವೃದ್ಧಿಿ ಕಾರ್ಯಗಳನ್ನು ಸ್ಥಗಿತಗೊಳಿಸುವುರೊಂದಿಗೆ ರಾಷ್ಟ್ರದ ಅಭಿವೃದ್ಧಿಿ ಕುಂಟಿತಗೊಳಿಸಿವೆ. ಅವಶ್ಯವಾದ ಮಾನವ ಸಂಪನ್ಮೂಲ ಚೈತನ್ಯದ ಪ್ರಾಾಮಾಣಿಕ ಬಳಕೆಗೂ ತಡೆಯೊಡ್ಡಿಿದೆ. ಇನ್ನೂ ನಮ್ಮ ಸಾಧನೆ ಸಾರುವ ವಾಸ್ತುಶಿಲ್ಪ, ಕಲಾ ಸಂಗ್ರಹ ಕೇಂದ್ರಗಳನ್ನು ವಿನಾಶದ ಅಂಚಿಗೆ ತಳ್ಳುತ್ತದೆ. ಯುದ್ಧ ಬರೀ ನಮ್ಮ ಯೋಧರ ಸಾವೊಂದರಲ್ಲಿಯೇ ಅಂತ್ಯವಾಗುವುದಿಲ್ಲ. ಅದು ಸಮಗ್ರ ದೇಶದ ಸರ್ವಾಂಗೀಣ ಅವನತಿಗೂ ಕಾರಣವಾಗಿ ಬಡತನವನ್ನು ಹೆಚ್ಚಿಿಸುವುದರ ಮೂಲಕ ಬದುಕುಳಿದವರ ಮನೋಬಲವನ್ನು ಕುಗ್ಗಿಿಸುತ್ತದೆ. ಉದಾಃ ಈಗ ಅಫ್ಘಾಾನಿಸ್ತಾಾನದ ಶೇ. 67.7ರಷ್ಟು ಯುವಕರು ವಿವಿಧ ಖಿನ್ನತೆಯಿಂದ ಬಳಲುತ್ತಿಿದ್ದಾಾರೆ. ಬೋಸ್ನಿಿಯಾದಲ್ಲಿ 40ರಷ್ಟು ಜನರು ಬರೀ ದ್ವೇಷದ ಮಾತುಗಳನ್ನು ಆಡುತ್ತಿಿದ್ದಾಾರೆ. ಇದೇ ರೀತಿ ರುವಾಂಡಾ, ಚೆಚಿನ್ಯಾಾ, ಲೆಬನಾನ್, ಪ್ಯಾಾಲಸ್ತೀನ್, ಇಸ್ರೇಲ್, ಸೊಮಾಲಿಯಾ, ಉಗಾಂಡ, ಶ್ರೀಲಂಕಾ ಮತ್ತು ಇರಾನ್ ಮೊದಲಾದ ದೇಶಗಳು ಈಗಾಗಲೇ ಜರ್ಜರಿತವಾಗಿವೆ. ಈ ದೇಶಗಳಲ್ಲಿ ಗೆದ್ದವರು ಯಾರು? ಸೋತವರು ಯಾರು? ಇಂದಿಗೂ ಯಾರಿಗೆ ತಿಳಿಯದ ಸಂಗತಿಯಾಗಿದೆ. ಒಟ್ಟಾಾರೆ, ಯಾವ ದೇಶವೂ ಕ್ಷೇಮವಾಗಿ ಉಳಿಯುವುದಿಲ್ಲವಾದ್ದರಿಂದ ದೇಶಪ್ರೇಮವೆನ್ನುವುದು ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತದೆ.
ಈಗ ಮತ್ತೆೆ ಮತ್ತೆೆ ಯುದ್ಧದ ಮಾತುಗಳು ಕೇಳಿ ಬರುತ್ತಿಿವೆ. ರಾಷ್ಟ್ರ ನಾಗರಿಕ ರಾಷ್ಟ್ರವಾಗಿ ಬದುಕುತ್ತಿಿದೆ ಎಂದರೆ ಅದು ಕಾಪಿಟ್ಟುಕೊಂಡು ಬಂದಿರುವ ವಿವಿಧತೆಯಲ್ಲಿ ಏಕತೆಯೇ ಅದರ ಜೀವಾಳ. ಇತಿಹಾಸದ ತಿಳಿವಳಿಕೆಯೇ ಇಲ್ಲದ ಕೆಲವರಿಗೆ ಯುದ್ಧದಿಂದ ಆಗುವ ಅನಾಹುತಗಳನ್ನು ತಿಳಿಸುವುದಾದರೂ ಹೇಗೆ? ಧರ್ಮಾಂಧತೆಯ ಕೂಪದಲ್ಲಿರುವವರಿಗೆ ಯಾವ ಬುದ್ಧಿಿ ಹೇಳಲು ಸಾಧ್ಯ? ಯುದ್ಧವು ಜನರ ಮನಸ್ಸಿಿನ ಆರೋಗ್ಯವನ್ನು ಹಾಳು ಮಾಡುವುದಲ್ಲದೇ ಭೌತಿಕವಾಗಿ ದೇಶವನ್ನು ಘಾಸಿಗೊಳಿಸುತ್ತದೆ. ಯುದ್ಧವು ಉಂಟು ಮಾಡಿದ ಗಾಯಗಳನ್ನು ಗುಣಪಡಿಸುವುದು ಅಸಾಧ್ಯ. ಇದು ಸಾಮಾನ್ಯ ಜನತೆಯ ತಿಳಿವಳಿಕೆಗೆ ನಿಲುಕದ್ದು, ಭಯಾನಕವಾದದು. ನಂತರ ಕಾಯಿಲೆಗಳು ಹರಡುವುದರಿಂದ ದೇಶದ ಅಭಿವೃದ್ಧಿಿ 20ವರ್ಷ ಹಿಂದಕ್ಕೆೆ ತಳ್ಳಲ್ಪಡುತ್ತದೆ.
ಆಕ್ರಂದನವೇ ಯುದ್ಧದ ಸ್ಥಾಾಯೀಭಾವವಾಗಿರುವುದರಿಂದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಹೀನಗೊಳಿಸುತ್ತವೆ. ಚರಿತ್ರೆೆಯ ಪುಟಗಳನ್ನು ಯುದ್ಧಕಾಲಕ್ಕೂ ಮುನ್ನ ನಾವು ನೋಡದೆ ಹೋದರೆ ವರ್ತಮಾನ ಅರ್ಥವಾಗುವುದಿಲ್ಲ. ವರ್ತಮಾನ ಅರ್ಥವಾಗದಿದ್ದರೆ ಭವಿಷ್ಯ ಕಗ್ಗತ್ತಲಿನ ಕಾರ್ಮೋಡವಾಗುತ್ತದೆ.
ಭಯೋತ್ಪಾಾದನೆ ಎಂಬುದು ಈ ಜಗತ್ತಿಿಗಂಟಿದ ಶಾಪ. ತನ್ನ ಧರ್ಮವೇ ಶ್ರೇಷ್ಠ ಎಂಬ ಭ್ರಮೆಗೆ ಬಿದ್ದವರೆಲ್ಲ ಜಗತ್ತಿಿನ ಅಗ್ನಿಿಕುಂಡದೊಳಗೆ ಬಂಧಿಯಾಗಿದ್ದಾಾರೆ. ದೇಶವನ್ನು ಆಳುವ ನೇತಾರರು ಪಕ್ಷಾಾತೀತವಾಗಿ ಈ ಸಮಸ್ಯೆೆಯ ಬೇರು ಎಲ್ಲಿದೆ ಹುಡುಕಿ ನಾಶ ಮಾಡದೇ ಹೋದರೆ ಮನುಕುಲಕ್ಕೆೆ ವಿನಾಶವನ್ನು ಹೊತ್ತು ತರುತ್ತಲೇ ಇರುತ್ತದೆ. ಯುದ್ಧದ ಸಂದರ್ಭದಲ್ಲಿ ಯುವಕರು ಸಾಯುತ್ತಾಾರೆ, ಮುದುಕರು ಮಾತನಾಡುತ್ತಾಾರೆ ಎಂದು ಅನುಭವಿಗಳು ಹೇಳುವ ಮಾತೊಂದಿದೆ. ಇನ್ನೂ ಯುದ್ಧ ಎಂದರೆ ಟಿವಿ ಸ್ಟುಡಿಯೊಗಳಲ್ಲಿ ಕುಳಿತು ಆಡುವ ಆಕ್ರೋೋಶದ ಮಾತುಗಳಲ್ಲ, ಸ್ಟುಡಿಯೊ ರೂಮಿನ ಕಂಪ್ಯೂೂಟರ್ ಸೃಷ್ಟಿಿಸುವ ಗ್ರಾಾಫಿಕ್ ಯುದ್ಧಗಳಲ್ಲ ಎಂಬ ತಿಳಿವು ನಮ್ಮ ಮಾಧ್ಯಮಗಳಿಗೆ ದಕ್ಕಬೇಕಿದೆ. ವಾಸ್ತವವಾಗಿ ಇಂದಿಗೂ ಶಿಕ್ಷಣ, ಆರೋಗ್ಯ, ಉದ್ಯೋೋಗ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ನಮ್ಮಂಥ ಅಭಿವೃದ್ಧಿಿಶೀಲ ದೇಶಗಳಲ್ಲಿ ಭವಿಷ್ಯದ ಅಭಿವೃದ್ಧಿಿಯ ದೃಷ್ಟಿಿಯಿಂದ ಅತ್ಯಂತ ಅಸಮರ್ಪಕ ನಿರ್ಧಾರವಾಗುತ್ತದೆ. ಯುದ್ಧಕ್ಕೆೆ ಆರಂಭವಿದೆ, ಕೊನೆ ಎಂಬುದಿಲ್ಲ ಎಂಬ ಜಾಗತಿಕ ಸತ್ಯವನ್ನು ಜಗತ್ತಿಿನ ಚರಿತ್ರೆೆ ಈಗಾಗಲೇ ನಮಗೆ ತಿಳಿಸಿಕೊಟ್ಟಿಿದೆ.
ಕೊನೆಯದಾಗಿ, ಭಾರತ ಶಾಂತಿಪ್ರಿಿಯರ ದೇಶ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರಂತಹ ಪುಣ್ಯಪುರುಷರ ಜನ್ಮಭೂಮಿ ಮತ್ತು ಕರ್ಮಭೂಮಿ. ಅಂದು ಶಾಂತಿ ಮತ್ತು ಅಹಿಂಸೆಯ ಅಸ್ತ್ರವನ್ನೇ ಬಳಸಿಕೊಂಡು ನಾವು ಬ್ರಿಿಟಿಷರಿಂದ ಸ್ವಾಾತಂತ್ರ್ಯ ಪಡೆದೆವು. ಇಂದು ಕೂಡ ಇದೇ ಅಸ್ತ್ರ ಬಳಸಿಕೊಂಡು ಉಗ್ರವಾದ ಹತ್ತಿಿಕ್ಕಬೇಕು ಪ್ರಗತಿಪರ ಚಿಂತಕರ ವಾದ. ನಮ್ಮ ದೇಶಕ್ಕೆೆ ಸ್ವಾಾತಂತ್ರ್ಯ ಸಿಕ್ಕಂದಿನಿಂದ ಇಂದಿನವರೆಗೂ ಉಗ್ರರ ಪೀಡೆಗೆ ಪರಿಹಾರ ಪಡೆಯಲಾಗಲಿಲ್ಲವೆಂದರೆ ಈ ದೇಶದ ದೌರ್ಭಾಗ್ಯವೇ ಸರಿ. ಉಗ್ರ ಚಟುವಟಿಕೆಗಳನ್ನು ಶಾಂತಿಮಂತ್ರದಿಂದ ನಿಗ್ರಹಿಸುವುದು ಈಗ ಕಷ್ಟ. ಸ್ವಾಾತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ಶತ್ರು ಪಾಳಯಕ್ಕೆೆ ನೀತಿ ಸಂಹಿತೆಯಿತ್ತು, ಸಂವಿಧಾನ ಎಂಬ ಪವಿತ್ರ ಗ್ರಂಥಕ್ಕೆೆ ಅಪಾರ ಮನ್ನಣೆ ಇತ್ತು. ಆದುದರಿಂದ ಆಗ ಶಾಂತಿ-ಅಹಿಂಸೆಗಳಿಗೆ ಬೆಲೆ ಸಿಕ್ಕಿಿತು. ಆದರೆ ಈಗ ನಮ್ಮ ಮುಂದಿರುವ ವಿದ್ವಂಸಕರು, ಸಾಮಾಜಿಕ ಜಾಲತಾಣ ಅವರನ್ನು ನಿಯಂತ್ರಿಿಸಲು ಶಾಂತಿಮಂತ್ರ ಪಠಿಸಿ ಹೆಡ್ಡತನ ತೋರುವ ಬದಲು ಅವರದೇ ಭಾಷೆಯಲ್ಲಿ ಅವರ ಮೂಲವನ್ನು ನಿರ್ನಾಮ ಮಾಡುವುದು ಒಳಿತು.

No comments:

Post a Comment