ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Thursday, June 11, 2020

ಗದ್ಯಪಾಠ-4.ಭಾಗ್ಯಶಿಲ್ಪಿಗಳು


ಒಬ್ಬ ವ್ಯಕ್ತಿಯ ಕುರಿತಾದ ಕಿರುಪರಿಚಯವನ್ನು ವ್ಯಕ್ತಿ ಚಿತ್ರ ಎಂದು ಸಂಕ್ಷೀಪ್ತವಾಗಿ 
ಹೇಳಬಹುದು. ಕನ್ನಡದಲ್ಲಿ ವಿಶೇಷವಾಗಿ ಡಾ,ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ‘ಸಾಹಿತ್ಯ ರತ್ನ ಸಂಪುಟ’ಡಾ.ಎ.ಎನ್.ಮೂರ್ತಿರಾಯರ ‘ಚಿತ್ರಗಳು ಪತ್ರಗಳು’ ಕೃತಿಗಳು ಕನ್ನಡದ ಶ್ರೇಷ್ಟ ವ್ಯಕ್ತಿಚಿತ್ರ ಕೃತಿಗಳಾಗಿವೆ.

ಭಾಗ್ಯಶಿಲ್ಪಿಗಳು ವಿಡಿಯೋಗಳು




Wednesday, June 10, 2020

ಆಧ್ಯಾತ್ಮಿಕ ಸಾಹಿತ್ಯ

ಭಗವದ್ಗೀತೆ - ಶ್ಲೋಕಗಳಿಗೆ ಗದ್ಯಾನುವಾದ



·                ಭಗವದ್ಗೀತೆ - ಪ್ರಸ್ತಾವನೆ ಮತ್ತು ಪೀಠಿಕೆ
·        ಭಗವದ್ಗೀತೆ ಅಧ್ಯಾಯ-1(ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-2 (ಶ್ಲೋಕ 1 ರಿಂದ 40)
·        ಭಗವದ್ಗೀತೆ ಅಧ್ಯಾಯ-2 (ಶ್ಲೋಕ 41 ರಿಂದ 72)
·        ಭಗವದ್ಗೀತೆ ಅಧ್ಯಾಯ-3 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-4 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-5 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-6 (ಶ್ಲೋಕ-1 ರಿಂದ 22)
·        ಭಗವದ್ಗೀತೆ ಅಧ್ಯಾಯ-6 (ಶ್ಲೋಕ-23 ರಿಂದ 47)
·        ಭಗವದ್ಗೀತೆ ಅಧ್ಯಾಯ-7 (ಶ್ಲೋಕ 1 ರಿಂದ 15)
·        ಭಗವದ್ಗೀತೆ ಅಧ್ಯಾಯ-7 (ಶ್ಲೋಕ-16 ರಿಂದ 30)
·        ಭಗವದ್ಗೀತೆ ಅಧ್ಯಾಯ-8 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-9 (ಶ್ಲೋಕ 1 ರಿಂದ 15)
·        ಭಗವದ್ಗೀತೆ ಅಧ್ಯಾಯ-9 (ಶ್ಲೋಕ 16 ರಿಂದ 34)
·        ಭಗವದ್ಗೀತೆ ಅಧ್ಯಾಯ-10 (ಶ್ಲೋಕ 1 ರಿಂದ 20)
·        ಭಗವದ್ಗೀತೆ ಅಧ್ಯಾಯ-10 (ಶ್ಲೋಕ 21 ರಿಂದ 30)
·        ಭಗವದ್ಗೀತೆ ಅಧ್ಯಾಯ-10 (ಶ್ಲೋಕ 31 ರಿಂದ 42)
·        ಭಗವದ್ಗೀತೆ ಅಧ್ಯಾಯ-11 (ಶ್ಲೋಕ 1 ರಿಂದ 20)
·        ಭಗವದ್ಗೀತೆ ಅಧ್ಯಾಯ-11 (ಶ್ಲೋಕ 21 ರಿಂದ 40)
·        ಭಗವದ್ಗೀತೆ ಅಧ್ಯಾಯ-11 (ಶ್ಲೋಕ 41 ರಿಂದ 55) 
·        ಭಗವದ್ಗೀತೆ ಅಧ್ಯಾಯ-12 (ಶ್ಲೋಕ 1 ರಿಂದ 20) (ಎಲ್ಲಾ)
·        ಭಗವದ್ಗೀತೆ ಅಧ್ಯಾಯ-13 (ಶ್ಲೋಕ 1 ರಿಂದ 20)
·        ಭಗವದ್ಗೀತೆ ಅಧ್ಯಾಯ-13 (ಶ್ಲೋಕ 21 ರಿಂದ 34)
·        ಭಗವದ್ಗೀತೆ ಅಧ್ಯಾಯ-14 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-15 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-16 (ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-17 ಎಲ್ಲಾ ಶ್ಲೋಕಗಳು)
·        ಭಗವದ್ಗೀತೆ ಅಧ್ಯಾಯ-18 (ಶ್ಲೋಕ 1 ರಿಂದ 20)
·        ಭಗವದ್ಗೀತೆ ಅಧ್ಯಾಯ-18 (ಶ್ಲೋಕ 21 ರಿಂದ 40)
·        ಭಗವದ್ಗೀತೆ ಅಧ್ಯಾಯ-18 (ಶ್ಲೋಕ 41 ರಿಂದ 66)
·        ಭಗವದ್ಗೀತಾ-ಫಲಶ್ರುತಿಃ ಮತ್ತು ಉಪಸಂಹಾರ ಅಧ್ಯಾಯ-18 
-:ಕೃತಜ್ಞತೆಗಳು:-

kannadadeevige.blogspot.com


ಮಂಕುತಿಮ್ಮನ ಕಗ್ಗ (ತಾತ್ಪರ್ಯ ಸಹಿತ)

(ಈ ಕೆಳಗಿನ ಆಯ್ಕೆಗಳಿಂದ ಆರಿಸಿ, ಓದಿರಿ)




ಚಂಪೂ ಸಾಹಿತ್ಯ

ಪದ್ಯಪಾಠ-8 ಕೆಮ್ಮನೆ ಮೀಸೆವೊತ್ತನೆ


ಆದಿಕವಿ ಪಂಪ


        ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು.[೧] ಇಮ್ಮಡಿ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪನ ಎರಡು ಮೇರು ಕೃತಿಗಳು.
ಹಿನ್ನೆಲೆ : 
  • ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ.
  • ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು.[೪] ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ.
  • ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಱಕ್ಕೆ ಸೇರಿದ [ನಿಡುಗುಂದಿ]] ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ.
  • ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ.
  • ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು.
ಜೀವನ  :
  • ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ.
  • ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ.
  • ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ.
  • ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕುರ್ಕ್ಕ್ಯಾಲ್ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ.
  • ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ.
  • ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ.
  • ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು.
ಬನವಾಸಿಯ ವರ್ಣನೆ  :
ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು
ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ)
ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ (ಉತ್ಪಲಮಾಲೆ)
ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.
ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ (ಉತ್ಪಲಮಾಲೆ)
ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ. 

ಕೆಮ್ಮನೆ ಮೀಸೆವೊತ್ತನೆ  ವಿಡಿಯೋಗಳು






ಪದ್ಯಪಾಠ-7 ವೀರಲವ

ಗದ್ಯಪಾಠ.6 ಛಲಮನೆ ಮೆರೆವೆಂ

Saturday, June 6, 2020

ಕಾವ್ಯಪ್ರಬೇಧಗಳು

ಪದ್ಯಪಾಠ 5.ಹಸುರು



            ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಕವನ (ಲಿರಿಕ್). ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಭಾರತಾದ್ಯಂತ ಬೀಸಿದ ಪುನರುಜ್ಜೀವನದ ಗಾಳಿಯಲ್ಲಿ ಕನ್ನಡವೂ ತನ್ನ ಹೊಸತನ ಕಂಡುಕೊಂಡು ಸೃಷ್ಟಿಸತೊಡಗಿದ ನವೋದಯ ಕಾವ್ಯ ಪ್ರಕಾರವನ್ನು ನಿರ್ದೇಶಿಸಲು ಹುಟ್ಟಿಕೊಂಡ ಪದ ಭಾವಗೀತೆ. ಇದು ಇಂಗ್ಲಿಷಿನ ಲಿರಿಕ್ ಎಂಬುದಕ್ಕೆ ಸಂವಾದಿಪದ. ನವೋದಯ ಕಾವ್ಯ ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳ ಲಿರಿಕ್ ಕಾವ್ಯದ ಪ್ರೇರಣೆ ಪ್ರಚೋದನೆಗಳ ಪರಿಣಾಮವಾದುದರಿಂದ ವಸ್ತು, ರೀತಿ ಹಾಗೂ ದೃಷ್ಟಿಯಲ್ಲಿ ಹಿಂದಿನ ಕನ್ನಡ ಕಾವ್ಯ ಪ್ರಕಾರಗಳಿಂದ ಬೇರೆಯೆಂದೇ ತೋರುವ ಈ ನವೋದಯ ಕಾವ್ಯಪ್ರಕಾರವನ್ನು ಹೆಸರಿಸಲು ಲಿರಿಕ್ ಎಂಬ ಪದದ ಅನುವಾದದಂತಿದೆ ಭಾವಗೀತೆ.
         ಮಾನವ ಹೃದಯಸಹಜವಾದ ಅನೇಕ ಭಾವಗಳನ್ನು ಅನುಸರಿಸಿ ಕವನಗಳಲ್ಲಿ ಅವುಗಳ ಪ್ರಾಮುಖ್ಯ ಗಮನಿಸಿ
  • ಪ್ರಕೃತಿಗೀತೆಗಳು, 
  • ಪ್ರೇಮಗೀತೆಗಳು, 
  • ಕೌಟುಂಬಿಕ ಗೀತೆಗಳು, 
  • ಸಾಮಾಜಿಕ ಗೀತೆಗಳು, 
  • ದೇಶ ಮತ್ತು ಭಾಷಾಗೀತೆಗಳು, 
  • ಗಣ್ಯವ್ಯಕ್ತಿಗೀತೆಗಳು, 
  • ಹಾಸ್ಯಗೀತೆಗಳು, ಕಥನ ಕವನಗಳು, ತತ್ತ್ವಚಿಂತನ ಗೀತೆಗಳು, ಅಧ್ಯಾತ್ಮಗೀತೆಗಳು ಎಂದು ಮುಂತಾಗಿ ವರ್ಗೀಕರಿಸಲಾಗಿದೆ

     ಭಾವಗೀತೆಯೂ ಒಂದು ವಿಶಿಷ್ಟ ಸಂದರ್ಭದಲ್ಲಿ ರಚನೆಯಾಗುತ್ತವೆ.  ಉದಾ: ಸೂರ್ಯೋದಯ, ಒಂದು ಹಕ್ಕಿಯ ಹಾಡನ್ನು ಆಲಿಸುವುದು, ರಾತ್ರಿ ಎಲ್ಲಿಯೋ ಮಗುವಿನ ಅಳುವನ್ನು ಕೇಳುವುದು, ಒಂದು ಹುಡುಗಿಯಲ್ಲಿ ಪ್ರೇಮ ಕವಿ ಪ್ರೀತಿಸಿದ ಸ್ಪಂದನಕ್ಕೆ ಶಬ್ದ ಶರೀರವನ್ನು ನೀಡುತ್ತದೆ. ಆದರೆ ಕವಿ ಶ್ರೇಷ್ಠ ಕವಿಯಾದರೆ ಅವನ ಎಲ್ಲ ಭಾವಗೀತೆಗಳನ್ನು ಓದಿದಾಗ ಅವನ ಸಮಗ್ರ ಸ್ಪಂದನ ನಮಗೆ ಅರಿವಾಗುತ್ತದೆ.)
  • ಪ್ರಕೃತಿಗೀತೆಯೆಂದರೆ……?

                              ಕವಿ  ತಾನು ನೋಡಿದ ಪ್ರಕೃತಿಯನ್ನು ಕುರಿತು, ಅಭಿವ್ಯಕ್ತಿಸುವ ಭಾವನೆಗಳೇ ಪ್ರಕೃತಿಗೀತೆಗಳು. 
ಪಂಪ ಮಹಾಕವಿ ಬನವಾಸಿ ಮಾರ್ಗವಾಗಿ ಸಂಚರಿಸುವಾಗ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು, ತಾನು ಬನವಾಸಿಯಲ್ಲಿಯೇ ಕೋಗಿಲೆಯಾಗಿಯೋ, ಮರಿದುಂಬಿಯಾಗಿಯೋ ಹುಟ್ಟಬೇಕೆಂದು ಅಪೇಕ್ಷಿಸುತ್ತಾನೆ. ತನ್ನ 'ವಿಕ್ರಮಾರ್ಜುನ ವಿಜಯ' ಮಹಾಕಾವ್ಯದಲ್ಲಿ ಬನವಾಸಿಯ ವರ್ಣನೆಯನ್ನು ಕುರಿತು ಮೂರು ಪದ್ಯಗಳನ್ನೇ ರಚಿಸಿದ್ದಾನೆ. ಅಲ್ಲಿನ ಪ್ರಕೃತಿ ಪಂಪನ ಕವಿ ಹೃದಯವನ್ನು ಅಷ್ಟು ಗಾಢವಾಗಿ ಮನಸೂರೆಗೊಳ್ಳುವುದಾದರೇ, ಇನ್ನು ಮಲೆನಾಡ ಮಡಿಲಿನಲ್ಲಿಯೇ ಹುಟ್ಟಿ ಬೆಳೆದ ಕುವೆಂಪು ಅವರ ಮೇಲೆ ಅದೆಷ್ಟು ಪ್ರಭಾವ ಬೀರಿರಬಹುದು? ಮಲೆನಾಡಿಗೆ ಇನ್ನೊಂದು ಹೆಸರೇ ಕುವೆಂಪು ಅವರೆಂದರೇ ಅತಿಶಯೋಕ್ತಿಯಲ್ಲ. ಜಿ.ಎಸ್ ಶಿವರುದ್ರಪ್ಪನವರ ಮಾತಿನಂತೆ "ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚವೇ ತನ್ನ ಅಭಿವ್ಯಕ್ತಿಗಾಗಿ ಕುವೆಂಪು ಅವರಂಥ ಕವಿಯನ್ನು ಸೃಷ್ಟಿಸಿತೋ ಏನೋ! ಕನ್ನಡದಲ್ಲಿ ನಿಸರ್ಗವನ್ನು ಗಾಢವಾಗಿ ಒಲಿದ ಹಾಗೂ ಅದರ ಚೆಲುವನ್ನು ಕುರಿತು ಬರೆದ ಕವಿಗಳು ಹಲವರಿದ್ದಾರೆ. ಆದರೆ ಅವರ್ಯಾರೂ ಬಹುಶಃ ಕುವೆಂಪು ಅವರಂತೆ ಇಂಥ ದುರ್ಗಮ ಅರಣ್ಯಶ್ರೇಣೀಯ ದಟ್ಟವಾದ ಅನುಭವಗಳಲ್ಲಿ ಬೇರೂರಿ ಬೆಳೆದವರಲ್ಲ. ಕನ್ನಡದ ಮೊದಲ ಕವಿ ಪಂಪನನ್ನು ಹೊರತುಪಡಿಸಿದರೆ ಯಾರೂ ಕುವೆಂಪು ಅವರಂತೆ ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗಿನ, ಅರಣ್ಯ ನಿಸರ್ಗಾನುಭವಗಳನ್ನು ಗ್ರಹಿಸಿ ಅಭಿವ್ಯಕ್ತಿಸಿದವರಲ್ಲ." ಎಂಬುದು ಸಮಂಜಸವಾಗಿದೆ. ೧೯೩೦ರಲ್ಲಿ ಪ್ರಕಟಗೊಂಡ ಅವರ ಮೊದಲ ಕವನ ಸಂಕಲನ 'ಕೊಳಲು'ವಿನ ಮೊದಲ ಕವಿತೆಯಲ್ಲೇ 'ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು.' ಎನ್ನುತ್ತಾ ಕಾಡಿನೊಂದಿಗಿರುವ ತಮ್ಮ ನಿಕಟ ಬಾಂಧವ್ಯವನ್ನು ಹೇಳುತ್ತಲೇ ಕನ್ನಡ ಸಾಹಿತ್ಯ ಲೋಕವನ್ನು ಕುವೆಂಪು ಪ್ರವೇಶಿಸಿದರು. ಕವಿತೆಗಳು ಮಾತ್ರವಲ್ಲದೆ, ಕತೆ ಕಾದಂಬರಿಗಳ ಮೂಲಕ ಇನ್ನಷ್ಟು ಗಾಢವಾಗಿ ನಿಸರ್ಗಾನುಭೂತಿಯನ್ನು ಕಟ್ಟಿಕೊಟ್ಟರು. ಇವುಗಳಿಗೆಲ್ಲಾ ಮೂಲ ದ್ರವ್ಯ ಒದಗಿಸಿದ್ದೇ ಮಲೆನಾಡಿನೊಂದಿಗಿನ ಅವರ ಅನುಭವಗಳು. ಮುಂದೆ ಕುವೆಂಪು ಅವರು ಮೈಸೂರಿನಲ್ಲಿರುವಾಗ ತಮ್ಮ ಈ ಅನುಭವಗಳನ್ನು, ಬಾಲ್ಯದ ನೆನಪುಗಳನ್ನು ವೆಂಕಣ್ಣಯ್ಯ, ತೀ.ನಂ.ಶ್ರೀ, ಡಿ.ಎಲ್.ನ ಮೊದಲಾದ ಮಿತ್ರರೊಂದಿಗೆ ಹಂಚಿಕೊಳ್ಳುವಾಗ, ವೆಂಕಣ್ಣಯ್ಯನವರು ಈ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ನೀಡಿದ ಸಲಹೆಯ ಪರಿಣಾಮವೇ 'ಮಲೆನಾಡಿನ ಚಿತ್ರಗಳು' ಎಂಬ ಸುಂದರ ಹೊತ್ತಿಗೆ.
ಚಿತ್ರಗಳ ಆರಂಭದಲ್ಲಿಯೇ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸುವ 'ಮಲೆನಾಡಿಗೆ ಬಾ' ಕವಿತೆಯ ಕೊನೆಯ ಸಾಲುಗಳಲ್ಲಿ,
'ರನ್ನನು ಪಂಪನು ಬಹರಿಲ್ಲಿ;
ಶ್ರೀ ಗುರುವಿಹನಿಲ್ಲಿ !
ಮಿಲ್ಟನ್, ಷೆಲ್ಲಿ ಬಹರಿಲ್ಲಿ ;
ಕವಿವರರಿಹರಿಲ್ಲಿ !
ಮುದ್ದಿನ ಹಳ್ಳಿ
ಈ ಕುಪ್ಪಳ್ಳಿ ;
ಬಾ, ಕಬ್ಬಿಗ ನಾನಿಹೆನಿಲ್ಲಿ !
ಎನ್ನುತ್ತಾ ಓದುಗರನ್ನು ಕುಪ್ಪಳ್ಳಿಗೆ ಆಹ್ವಾನಿಸುತ್ತಾರೆ. ಯಾವೊಬ್ಬ ಕವಿಯು ಹೀಗೆ ತಾನು ಹುಟ್ಟಿಬೆಳೆದ ಪರಿಸರದಲ್ಲಿ ನಾನಿರುವೆ ಬನ್ನಿ ಎಂದು ಕಾವ್ಯಾಸಕ್ತರನ್ನು ಆಹ್ವಾನಿಸಿದ ಉದಾಹರಣೆಯಿಲ್ಲ. ಅವರ ಮನೆಯ ತೆಂಕಣ ದಿಕ್ಕಿಗಿರುವ ಬೆಟ್ಟದ ಮೇಲೆ ಏರಿ ಹೋದರೆ ಕಾಣುವ ಸ್ಥಳ ಸಾಮಾನ್ಯರ ಕಣ್ಣಿಗೆ ಬರಿ ಕಲ್ಲುಕಾಡಾಗಿ ಕಂಡರೆ, ಕಲಾವಂತರಿಗೆ ಸ್ವರ್ಗದಂತೆ ಭಾಸವಾಗುವ 'ಕವಿಶೈಲ' ಮತ್ತು 'ನವಿಲು ಕಲ್ಲು'ಗಳ ವರ್ಣನೆಯನ್ನು ಅವರ ಪದಗಳಲ್ಲಿಯೇ ಓದಿ ಸವಿಯಬೇಕು. 'ಹಾಸ್ಯದ ಚಟಾಕಿ'ಯಲ್ಲಿ ಕುವೆಂಪು ಅವರು ಮಿತ್ರರೊಡಗೂಡಿ ಕಾಡಿನ ಬೇಟೆಗೆಂದು ಹೋದಾಗ ಅವರ ನಾಯಿಗೂ ನಾಗರಹಾವಿಗೂ ನಡೆವ ಜಟಾಪಟಿಯ ವಿನೋದ ಪ್ರಸಂಗ, 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ಬೇಟೆಗೆಂದು ಮಿತ್ರರೊಡನೆ ಹೋದಾಗ ಕಾಡಿನ ಕಗ್ಗತ್ತಲೆಯಲ್ಲಿ, ಜತೆಗೆ ತಂದಿದ್ದ ಕಾಫಿಯನ್ನು ಕುಡಿಯುವಾಗ ಕತ್ತಲೆಯಲ್ಲಿ ಮೂಗು ಬಾಯಿಯ ವ್ಯತ್ಯಾಸ ಗೊತ್ತಾಗದೆ ಕುಡಿದ ಕಾಫಿ ಮೂಗಿಗೂ ಹೋಗಿ ಕೆಮ್ಮು, ಸೀನು ಬಂದು ಆ ನೀರವ ಕಾಡಿನ ಮೌನದಲ್ಲಿ ಇವರ ಧ್ವನಿ ಪ್ರತಿಧ್ವನಿಸಿ, ಕಾಡು ಮಾವಿನ ಹಣ್ಣನ್ನು ತಿನ್ನಲು ಬಂದ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿದ್ದು, ಜತೆಯಿದ್ದ ಬೇಟೆಗಾರ ಇಟ್ಟ ಗುರಿ ಇದರಿಂದಾಗಿ ತಪ್ಪಿದ್ದು, ಹಿಂತಿರುಗಿ ಬರುವಾಗ ಇವರ ಕೆಮ್ಮು, ಸೀನಿನಿಂದಾಗಿ ಕೆಲಸ ಕೆಟ್ಟದಕ್ಕೆ ಸನ್ಮಾನವೂ ಆದದ್ದು ಬಹಳ ಸೊಗಸಾಗಿವೆ. 'ಅಜ್ಜಯ್ಯನ ಅಭ್ಯಂಜನ'ದ ಮಹೋತ್ಸವ, 'ಬಂದನಾ ಹುಲಿರಾಯನು' ಚಿತ್ರದಲ್ಲಿ ಹುಲಿರಾಯನ ವರ್ಣನೆ- ಕೂದಲೆಳೆಯಿಂದ ಹುಲಿಯಿಂದ ಪಾರಾಗುವ ರಂಗಯ್ಯನ ಪ್ರಾಣ ಸಂಕಟ, 'ಪುಟ್ಟಾಚಾರಿಯ ಕಾಡುಕೋಳಿ'ಯ ಚಿತ್ರದಲ್ಲಿ ಪುಟ್ಟಾಚಾರಿ ಒಮ್ಮೆ ಬೇಟೆಗೆಂದು ಕಾಡಿಗೆ ಹೋದಾಗ ಎದೆಯೆತ್ತರ ಬೆಳೆದ ಹುಲ್ಲಿನಲ್ಲಿ ಹೆಣ್ಣು ಹೆಬ್ಬುಲಿಯೊಂದು ತನ್ನ ಮರಿಗಳೊಡನೆ ಚೆಲ್ಲಾಟವಾಡುತ್ತಿದ್ದಾಗ, ಹುಲಿಯ ಬಾಲದ ತುದಿ ಮಾತ್ರ ಹುಲ್ಲಿನ ಮೇಲೆ ಕುಣಿದಾಡುವುದನ್ನು ಕಂಡು ಅದನ್ನು ಕಾಡುಕೋಳಿಯ ಪುಕ್ಕವೆಂದು ಭಾವಿಸಿ ಬಳಿ ಹೋಗಿ ನೋಡಿದಾಗ ಹುಲಿ ಎದ್ದು ನಿಂತು ಗುರ್ರೆಂದಾಗ ಜೀವ ಹೋದಂತಾಗಿ ಫಜೀತಿ ಪಟ್ಟುಕೊಂಡು ಕೋವಿ ಗುರಿ ಮಾಡಿ ಹುಲಿಗೆ ಅರಿವಾಗದಂತೆ ಒಂದೊಂದೆ ಹೆಜ್ಜೆ ಹಿಂದೆ ಇಟ್ಟು ಪಾರಾಗುವ ಪೇಚಿನ ಪ್ರಸಂಗ ನಗು ಅಳು ಎರಡನ್ನೂ ಒಟ್ಟಿಗೆ ಬರಿಸುತ್ತವೆ. ಇನ್ನು ಉಳಿದವುಗಳು ಕೂಡ ಹೀಗೆ ಒಂದಕ್ಕಿಂತ ಒಂದು ಮಿಗಿಲಾದ ಅವರ ಅನುಭವದ ಚಿತ್ರಗಳು, ಆ ಚಿತ್ರಗಳಲ್ಲಿನ ಪ್ರತಿಯೊಂದು ಸರಳವಾದ ವಿಷಯಗಳನ್ನು ಅವರು ವರ್ಣಿಸಿರುವ ಪರಿ, ಅದರ ವಿವರಣೆಗಳು, ಪ್ರಕೃತಿಯನ್ನು ವರ್ಣಿಸಲು ಇನ್ನು ಪದಗಳೇ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಓದುತ್ತಾ ಹೋದಂತೆ ನಾವುಗಳು ಇರುವ ಜಾಗದಿಂದಲೇ ಕುಪ್ಪಳ್ಳಿಯನ್ನು ಸಾಕ್ಷಾತ್ ಕಂಡ ಅನುಭವವಾಗುತ್ತದೆ. ಮಲೆನಾಡಿನ ಮಡಿಲಲ್ಲಿ ನಾವೇ ಮಗುವಾಗುತ್ತೇವೆ..




ಕನ್ನಡದ ಪ್ರಮುಖ ಪ್ರಕೃತಿ ಗೀತೆಗಳು ಮತ್ತು ಕವಿಗಳು

ಹಸುರು ಪದ್ಯಕ್ಕೆ ಸಂಬಂಧಿಸಿದ ವಿಡಿಯೋಗಳು












Thursday, June 4, 2020

ಕನ್ನಡ -ಇ ಪುಸ್ತಕಗಳ ಸಂಗ್ರಹ

ಕನ್ನಡ ಇ-ಪುಸ್ತಕಗಳ ಸಂಗ್ರಹ (kannadada_ebooks_pdf)

ಪ್ರಿಯ ಕನ್ನಡ ಸಾಹಿತ್ಯಾಭಿಮಾನಿಗಳೇ...

       ನಾವು ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರಗತಿಯ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆ ಬದಲಾವಣೆ ಸಾಹಿತ್ಯ ಪ್ರಪಂಚಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಒಂದು ಪುಸ್ತಕವನ್ನು ಓದಬೇಕೆಂದರೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿರುವ ಪುಸ್ತಕಗಳನ್ನೆಲ್ಲಾ ಜಾಲಾಡಿ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ ತಂದು ಓದುತ್ತಿದ್ದೆವು. ಆದರೆ ಇಂದಇನ ಆಧುನಿಕ ಯುಗದ ಪುಸ್ತಕದ ಮಳಿಗೆಗಳಲ್ಲಿ ನೀವು ಹುಡುಕಾಡ ಬೇಕಿಲ್ಲ. ಗಣಕಯಂತ್ರದಲ್ಲಿ ಆ ಪುಸ್ತಕ ಇರುವ ಸ್ಥಳವನ್ನು ಹುಡುಕಿ ಕೆಲವೇ ನಿಮಿಷಗಳಲ್ಲಿ ಪುಸ್ತಕ ನಿಮ್ಮ ಕೈಸೇರುತ್ತದೆ.

       ಅದಕ್ಕೂ ಮುಂದುವರೆದು ನಿಮ್ಮ ಮನೆಯಲ್ಲೇ ಕುರಿತು online ಮೂಲಕ ನಿಮಗೆ ಬೇಕಾದ ಪುಸ್ತಕಗಳನ್ನು ಮನೆಬಾಗಿಲಿಗೇ ಬರುವಂತೆ ಖರೀದಿಸಬಹುದು.

        ಇದನ್ನೂ ಮೀರಿ ಈಗ "ಇ-ಪುಸ್ತಕ" ಎಂಬ ಪದ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಈ "ಇ-ಪುಸ್ತಕ"ವೆಂದರೆ ನೀವು ಬಯಸುವ ಪುಸ್ತಕವು ನಿಮ್ಮ ಕೈ ಸ್ಪರ್ಷಕ್ಕೆ ನಿಲುಕದೆ ಕೇವಲ ನಿಮ್ಮ ಕಣ್ಣಿಗೆ ಮಾತ್ರ ಗೋಚರವಾಗುವಂತದ್ದು ಅದೂ ಗಣಕಯಂತ್ರ, ಮೊಬೈಲ್, ಟ್ಯಾಬ್ ನಂತಹ ಆಧುನಿಕ ಸಲಕರಣೆಗಳ ಸಹಾಯದ ಮೂಲಕ.

       ಈ ನಿಟ್ಟಿನಲ್ಲಿ ವಾಟ್ಸಾಪ, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದವುಗಳು ವಿಷಯ ಸಂಪತ್ತನ್ನು ವೇಗವಾಗಿ ತಲುಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿವೆ.

        ಈ ಮೇಲಿನ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.
           ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

 [ವಿಶೇಷ  ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್]

 

 

ಕ್ರ.ಸಂ

ಕೃತಿಯ ಹೆಸರು

ಗಾತ್ರ

1.      

ಅಗ್ನಿಹಂಸ-ಕುವೆಂಪು.pdf
View
    Download

3171k

2.      

ಅಪೂರ್ವ ಪಶ್ಚಿಮ.pdf
View
     Download

6380k

3.      

ಅಮರ ಚಿತ್ರಕಥೆ.pdf
View
    Download

7222k

4.      

ಅಮರ ಪ್ರೇಮದ ಮಧು.pdf
View
    Download

4416k

5.      

ಅರಮನೆ-.pdf
View
    Download

6484k

6.      

ಉತ್ತರ_ಕರ್ನಾಟಕ_ಜಾನಪದ_ಕಥೆಗಳು.pdf
View
    Download

3590k

7.      

ಎದೆಗೆ ಬಿದ್ದ ಅಕ್ಷರ.pdf
View
    Download

874k

8.      

ಒಡನಾಟ.pdf
View
    Download

10432k

9.      

ಕನಕದಾಸರ ಕೀರ್ತನೆಗಳು & ಮುಂಡಿಗೆಗಳು.pdf
View
    Download

17741k

10.  

ಕನ್ನಡ, ಕರ್ನಾಟಕ ಏನು ಮಾಡಬೇಕು.pdf
View
    Download

3559k

11.  

ಕನ್ನಡ ಪ್ರಬಂಧಗಳು.pdf
View
    Download

7038k

12.  

ಕವಿಗಳು.pdf
View
    Download

1620k

13.  

ಕಿಂಕಿಣಿ-ಕುವೆಂಪು.pdf
View
    Download

2332k

14.  

ಕಿರಗೂರಿನ ಗಯ್ಯಾಳಿಗಳು.pdf
View
    Download

5831k

15.  

ಕೃತ್ತಿಕೆ-ಕುವೆಂಪು..pdf
View
    Download

2590k

16.  

ಕೋಗಿಲೆ ಮತ್ತು ಸೋವಿಯತ್ ರಷ್ಯಾ-ಕುವೆಂಪು.pdf
View
    Download

2687k

17.  

ಗದಾಯುದ್ಧ ಸಂಗ್ರಹ thi nam Sri .pdf
View
    Download

4573k

18.  

ಗಾದೆಗಳ ಲೋಕ.pdf
View
    Download

2166k

19.  

ಗಾದೆ ಪಂಡಿತ ಹು.ಮ.ರಾಮಾರಾಧ್ಯ.pdf
View
    Download

5951k

20.  

ಗೌರ್ಮೆಂಟ್_ಬ್ರಾಹ್ಮಣ.pdf
View
    Download

1403k

21.  

ಗ್ರಾಮಾಯಣ.pdf
View
    Download

1994k

22.        

 ಗದಾಯುದ್ಧ ಸಂಗ್ರಹ thi nam Sri .pdf
View
    Download

4573k

23.  

ಗಾದೆಗಳ ಲೋಕ.pdf
View
    Download

2166k

24.  

ಗಾದೆ ಪಂಡಿತ ಹು.ಮ.ರಾಮಾರಾಧ್ಯ.pdf
View
    Download

5951k

25.  

ಗೌರ್ಮೆಂಟ್_ಬ್ರಾಹ್ಮಣ.pdf
View
    Download

1403k

26.  

ಚಂಧ್ರಹಾಸ.pdf
View
    Download

695k

27.  

ಚಿಗುರಿದ ಕನಸು.pdf
View
    Download

5022k

28.  

ಚಿದಂಬರ_ರಹಸ್ಯ.pdf
View
    Download

3390k

29.  

ಜೈಮಿನಿ_ಭಾರತ.pdf
View
    Download

1645k

30.  

ಜ್ಯೋತಿಯೇ ಆಗು ಜಗಕೆಲ್ಲ.pdf
View
    Download

1642k

31.  

ತತ್ಸಮ ತದ್ಬವ -Merged-1.pdf
View
    Download

214k

32.  

ತೀ.ನಂ.ಶ್ರೀ. ಸಮಗ್ರ ಗದ್ಯ.pdf
View
    Download

8921k

33.  

ದಾಟು.pdf
View
    Download

4262k

34.  

ನಕ್ಕು ನಲಿಯುವ.pdf
View
    Download

4997k

35.  

ನನ್ನ_ನಲ್ಲ.pdf
View
    Download

2048k

36.  

ಪರ್ಣಕುಟಿ.pdf
View
    Download

1552k

37.  

ಪಾತ್ರೆ ಪರಿಕರ ಸಿ.ಎ.ಓ..pdf
View
    Download

430k

38.  

ಪುರಾಣ ಹಾಗು ಚರಿತ್ರೆಗಳ ಹಿನ್ನೆಲೆಯಲ್ಲಿ ಪಂಪನ ಕಾವ್ಯಗಳು.pdf
View
    Download

3661k

39.  

ಪ್ರಭುಲಿಂಗಲೀಲೆ.pdf
View
    Download

4089k

40.  

ಬಜೆಟ್ 2017 ಕನ್ನಡ.pdf
View
    Download

335k

41.  

ಭಗವದ್ಗೀತಾ-ಯಥಾರೂಪ.pdf
View
    Download

6119k

42.  

ಭಗವದ್ಗೀತೆ - ಬನ್ನಂಜೆ .pdf
View
    Download

2863k

43.  

ಭರತೇಶ ವೈಭವ ಸಂಗ್ರಹ.pdf
View
    Download

7596k

44.  

ಭಾರತೀಯ ಸ್ಮೃತಿಗಳು1.pdf
View
    Download

18134k

45.  

ಮರದೊಳಗಣ_ಕಿಚ್ಚು.pdf
View
    Download

2584k

46.  

ಮಲೆಗಳಲ್ಲಿ ಮದುಮಗಳು.pdf
View
    Download

2089k

47.  

ಮೂಕಜ್ಜಿಯ ಕನಸುಗಳು.pdf
View
    Download

1897k

48.  

ವ್ಯಾಕರಣ kannada grammer-1-1.pdf
View
    Download

264k

49.  

ಹೆಜ್ಜೆಗುರುತು. pdf
View
    Download

713k

50.  

ಕಟ್ಟೆ ಪುರಾಣ.pdf
View
    Download

2073k

51.  

ಸಂಸ್ಕಾರ_ಯು.ಆರ್.ಅನಂತಮೂರ್ತಿ.pdf
View
    Download

385k

52.  

ರಕ್ತಾಕ್ಷಿ - ಕುವೆಂಪು.pdf
View
    Download

6879k

53.  

ವಿವೇಕ ಚಿಂತಾಮಣಿ.pdf
View
    Download

4443k

54.  

ವ್ಯಾಕರಣ ಮಾರ್ಗ.pdf
View
    Download

713k

55.  

ಶಿಕ್ಷಕರ ವರ್ಗಾವಣಾ ಕಾಯ್ದೆ-2017.pdf
View
    Download

579k

56.  

ಶೇಕ್ಸ್‌ ಪಿಯರ್ ಎರಡು ನಾಟಕಗಳ ಅಧ್ಯಯನ.pdf
View
    Download

5931k

57.  

ಷೋಡಶಿ-ಕುವೆಂಪು.pdf
View
    Download

1898k

 

58.  

ಶ್ರೀ ರಾಮಾಯಣ ದರ್ಶನಂ.pdf
View   Download

3139k
 

 

59. 

ಪುರಾಣನಾಮಚೂಡಾಮಣಿ.pdf
View Download

18653k